Advertisement

ಕುಂಬಳೆ: ಬಿ.ಜೆ.ಪಿ.ಯಿಂದ ಪ್ರತಿಭಟನೆ

08:40 AM Jul 30, 2017 | Team Udayavani |

ಕುಂಬಳೆ: ತಿರುವನಂತಪುರದಲ್ಲಿ ಸಿ.ಪಿ.ಎಂ. ನಾಯಕರು ಮತ್ತು ಕಾರ್ಯಕ ರ್ತರು ಬಿ.ಜೆ.ಪಿ. ಕಾರ್ಯಾಲಯಕ್ಕೆ , ಪಕ್ಷದ ನಾಯಕರ ಮನೆಗೆ ಕಲ್ಲೆಸೆದ ಮತ್ತು ರಾಜ್ಯಾಧ್ಯ ಕ್ಷರ ಸಹಿತ ನೇತಾರರ ವಾಹನಗಳಿಗೆ ಹಾನಿ ಎಸಗಿದ ಕೃತ್ಯವನ್ನು ಪ್ರತಿಭಟಿಸಿ ಕುಂಬಳೆಯಲ್ಲಿ  ಬಿ.ಜೆ.ಪಿ. ಪಂಚಾಯತ್‌ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಬಿ.ಜೆ.ಪಿ.ಮಂಡಲ ಉಪಾಧ್ಯಕ್ಷ ಕೆ. ವಿನೋದನ್‌ ಕಡಪ್ಪುರ ಮಾತನಾಡಿ ಕೇರಳದಲ್ಲಿ ಸಿ.ಪಿ.ಎಂ. ಅಧಿಕಾರದ ಮದದಲ್ಲಿ ಬಿ.ಜೆ.ಪಿ. ನಾಯಕರ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದೆ. ಪಕ್ಷದ ಕಚೇರಿಗಳಿಗೆ ಹಾನಿ ಎಸಗುತ್ತಿದೆ.ಇದಕ್ಕೆ ಆಡಳಿತದ ಸಿಎಂ ಸಹಿತ ಕೆಲವು ಸಂಪುಟ ಸಚಿವರು ಪರೋಕ್ಷ ಬೆಂಬಲ ನೀಡುತ್ತಿರುವುದಾಗಿ ಆರೋಪಿಸಿದರು.ಇದಕ್ಕೆ ಸಿಪಿಎಂ ಪಕ್ಷ ಮುಂದಿನ ದಿಗಳಲ್ಲಿ ಬೆಲೆ ತೆರಬೇಕಾಗಬಹುದೆಂಬುದಾಗಿ ಎಚ್ಚರಿಸಿದರು. 

ಪ್ರತಿಭಟನೆಗೆ ಮುನ್ನ ಕುಂಬಳೆ ಪೇಟೆಯಲ್ಲಿ ನಡೆದ ಮೆರವಣಿಗಗೆ ಪಕ್ಷದ ನಾಯಕ ಎಚ್‌. ಸತ್ಯಶಂಕರ ಭಟ್‌, ಶಂಕರ ಆಳ್ವ, ಹರೀಶ್‌ ಗಟ್ಟಿ, ಕೆ. ರಮೇಶ್‌ ಭಟ್‌, ಮಹೇಶ್‌ ಪುಣಿಯೂರು, ಶಶಿ ಕುಂಬಳೆ, ಸುಜಿತ್‌ ರೈ, ಕೆ. ಸುಧಾಕರ ಕಾಮತ್‌, ಗುರುಪ್ರಸಾದ್‌, ಶಂಕರ ಕಂಚಿಕಟ್ಟೆ ನೇತೃತ್ವ ನೀಡಿದರು. ವಸಂತ ಕುಮಾರ್‌ ಸ್ವಾಗತಿಸಿದರು. ಅನಿಲ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next