Advertisement

ಕುಂಬಳೆ : ಯುವಕ ಕೊಲೆ ಪ್ರಕರಣ : ಇಬ್ಬರ ವಿಚಾರಣೆ, 3 ಕಾರುಗಳು ವಶ

12:12 AM Jun 29, 2022 | Team Udayavani |

ಕುಂಬಳೆ: ತಂಡವೊಂದು ಅಪಹರಿಸಿ ಕೊಲೆಗೈದ ಪುತ್ತಿಗೆಯ ಮುಗುರೋಡಿನ ಅಬೂಬಕ್ಕರ್‌ ಸಿದ್ಧಿಖ್‌ ಹತ್ಯೆಯ ಆರೋಪಿಗಳಲ್ಲಿ ಕೆಲವರು ಗೋವಾಕ್ಕೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

Advertisement

ಪೊಲೀಸರಿಗೆ ಎಲ್ಲ ಆರೋಪಿಗಳ ಮಾಹಿತಿ ದೊರೆತಿದ್ದು, ಇಬ್ಬರನ್ನು ವಶಪಡಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲವು ಆರೋಪಿಗಳು ಗಲ್ಫ್ಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಕೊಲೆಗೆ ಬಳಸಿದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿದ್ಧಿಖ್‌ ಅವರ ಸಹೋದರ ಅನ್ಸಾರಿ ಅವರ ದೂರಿನಂತೆ ನೂಜಿ, ಶಾಫಿ ಸಹಿತ 15 ಮಂದಿಯ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಹಣದ ವಿಚಾರ ಕೊಲೆಗೆ ಕಾರಣವೆಂಬುದಾಗಿ ತಿಳಿದು ಬಂದಿದೆ.

ತಂಡದಿಂದ ಗಂಭೀರ ಹಲ್ಲೆಗೊಳಗಾದ ಅನ್ವರ್‌ ಮತ್ತು ಅನ್ಸಾರಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣ ನಾಯರ್‌ ಅವರ ನೇತೃತ್ವದಲ್ಲಿ 10ಮಂದಿ ಪೊಲೀಸರ ತಂಡವನ್ನು ತನಿಖೆಗೆ ನೇಮಕಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next