Advertisement

“ಕುಮಾರಸ್ವಾಮಿ, ನೀನೊಬ್ಬ ಸಣ್ಣ ರಾಜಕಾರಣಿ’

10:34 PM Sep 20, 2019 | Team Udayavani |

ಬಾಗಲಕೋಟೆ: “ಕುಮಾರಸ್ವಾಮಿ, ನೀನೊಬ್ಬ ಸಣ್ಣ ರಾಜಕಾರಣಿ. ಇನ್ನೂ ಹುಡುಗ. ಲಾಸ್ಟ್‌ ಬೆಂಚ್‌ನಲ್ಲಿ ಕುಳಿತು, ಮಾಜಿ ಪ್ರಧಾನಿ ಮಗ ಎಂಬ ಕಾರಣಕ್ಕೆ ಸಿಎಂ ಆಗಿದ್ದೀಯಾ. ಯಡಿಯೂರಪ್ಪ ಹಾಗಲ್ಲ. ಹೋರಾಟ ಮಾಡಿ ಸಿಎಂ ಆದವರು. ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದರೆ ಸೀರಿಯಸ್‌ ಆಗಿ ಹೇಳುತ್ತಿದ್ದೇನೆ ನಾನು ಸುಮ್ಮನಿರಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಏಕವಚನದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, 40 ವರ್ಷಗಳಿಂದ ರಾಜಕೀಯದಲ್ಲಿ ದುಡಿದ ಯಡಿಯೂರಪ್ಪ ಬಗ್ಗೆ ಮಾತನಾಡುತ್ತೀಯಾ? ನಿಮ್ಮ ತಂದೆಗೆ ಎಷ್ಟು ಅನುಭವ ಇದೆಯೋ ಅಷ್ಟೇ ಅನುಭವ ಯಡಿಯೂರಪ್ಪ ಅವರಿಗಿದೆ. ಅವರಷ್ಟೇ ಚತುರತೆಯೂ ಇದೆ. ಬಿಎಸ್‌ವೈ ಕುಟುಂಬದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕುಮಾರಸ್ವಾಮಿಗೆ ಇಲ್ಲ. ನಾನು ಸೀರಿಯಸ್‌ ಆಗಿ ಹೇಳುತ್ತಿದ್ದೇನೆ. ಕುಮಾರಸ್ವಾಮಿ ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದರು.

ಕುಮಾರಸ್ವಾಮಿ ಅವರು ಬಿಎಸ್‌ವೈ ಪತ್ನಿ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದು ಸರಿಯಲ್ಲ. ಯಾರೂ ವೈಯಕ್ತಿಕ ವಿಷಯ ಮಾತನಾಡಬಾರದು. ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ.
-ಗೋವಿಂದ ಕಾರಜೋಳ, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next