Advertisement

ಕುಮಾರಸ್ವಾಮಿ ದೇವರು ಕೊಟ್ಟ ಮುಖ್ಯಮಂತ್ರಿ : ಶಾಸಕ ವೆಂಕಟರಾವ್ ನಾಡಗೌಡ

05:30 PM Apr 16, 2022 | Team Udayavani |

ಕೊಪ್ಪಳ: ಹೆಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆದರೂ ಅವರೊಬ್ಬ ದೇವರು ಕೊಟ್ಟ ಮುಖ್ಯಮಂತ್ರಿಯಾಗಿದ್ದಾರೆ. ಅವರು ಜನರು ಕೊಟ್ಟ ಮುಖ್ಯಮಂತ್ರಿಯಲ್ಲ ಎಂದು ಶಾಸಕ ವೆಂಕಟರಾವ್ ನಾಡಗೌಡ ಬಣ್ಣಿಸಿದ್ದಾರೆ.

Advertisement

ಮುನಿರಾಬಾದ್‌ನ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಚ್‌ಡಿಕೆ ಅವರು ನನಗೆ ಪೂರ್ಣ ಅಧಿಕಾರ ಕೊಡಿ ನಾನು ಅಭಿವೃದ್ಧಿಗೆ ಬದ್ದನಿದ್ದೇನೆ ಎಂದು ಜನರಿಗೆ ಮನವಿ ಮಾಡಿದ್ದರು. ಆದರೆ ಜನತೆ ಅವರಿಗೆ ಪೂರ್ಣ ಅಧಿಕಾರ ಕೊಡಲಿಲ್ಲ. ಅವರು ಅದೃಷ್ಟದಂತೆ ದೇವರು ಕೊಟ್ಟ ಮುಖ್ಯಮಂತ್ರಿಯಾಗಿದ್ದಾರೆ. ಜನರು ಕೊಟ್ಟ ಮುಖ್ಯಮಂತ್ರಿಯಲ್ಲ ಎಂದರು.

ಸಿದ್ದರಾಮಯ್ಯ ಅವರು ಹೆಚ್‌ಡಿಕೆ ಬಗ್ಗೆ ವ್ಯಂಗ್ಯವಾಡಿ ದೇವರಾಣೆ ಸಿಎಂ ಆಗಲ್ಲ ಎಂದಿದ್ದರು. ಆದರೆ ಹೆಚ್‌ಡಿಕೆ ಸಿಎಂ ಆದರು. ಸಿದ್ದು ಹೇಳಿದ್ದೆಲ್ಲವೂ ಉಲ್ಟಾ ಆಗಲಿದೆ ಎಂದರಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಸಾಲ ಮನ್ನಾ ಮಾಡಲು ಸಮಯವಿಲ್ಲ. ಆದರೆ ಆದಾನಿ, ಅಂಬಾನಿ ಸಾಲ ಮನ್ನಾ ಮಾಡುತ್ತಾರೆ. ಎಲ್ಲೆಡೆ ಬೆಲೆ ಏರಿಕೆಯಾಗಿದೆ. ಆದರೆ ಮೋದಿ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿದೆ. ದೇಶದ ಹಲವು ರಾಜ್ಯಗಳಲ್ಲಿ ಇಂದು ಪ್ರಾದೇಶಿಕ ಪಕ್ಷಗಳೇ ಅಧಿಕಾರ ನಡೆಸುತ್ತಿವೆ. ಜೆಡಿಎಸ್ 2023ರ ಚುನಾವಣೆಯಲ್ಲಿ ವಿಜನ್ 123 ಗುರಿಯೊಂದಿಗೆ ಸಜ್ಜಾಗಿದ್ದು ರೈತರ ಜಮೀನಿಗೆ ನೀರು ಹರಿಯಬೇಕೆಂಬ ಉದ್ದೇಶದಿಂದ ಜನತಾ ಜಲಧಾರೆ ಎನ್ನುವ ಯೋಜನೆಯ ಸಂಕಲ್ಪ ಮಾಡಿ 15  ನದಿಗಳ ಜಲ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next