Advertisement

ಕುಮಾರಧಾರಾ ಸ್ನಾನಘಟ್ಟ: ಪಹರೆ ಸಿಬಂದಿಗೆ ಟೆಂಟ್‌

01:18 PM Jul 23, 2018 | Team Udayavani |

ಸುಬ್ರಹ್ಮಣ್ಯ: ಕುಮಾರಧಾರಾ ಸ್ನಾನ ಘಟ್ಟ ಬಳಿ ಪಹರೆ ಕಾಯುವ ಸಿಬಂದಿಗೆ ಮಳೆಯಿಂದ ರಕ್ಷಣೆಗೆ ಟೆಂಟ್‌ ನೀಡಲಾಗಿದೆ. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಮುರಳೀಮೋಹನ ಚೂಂತಾರು ರವಿವಾರ ಹಸ್ತಾಂತರಿಸಿದರು. 

Advertisement

ಈ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಎಂ. ರವೀಂದ್ರ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲು, ದೇಗುಲದ ಕಚೇರಿಯ ನೋಣಪ್ಪ ಹಾಗೂ ಗೃಹ ರಕ್ಷಕ ಸಿಬಂದಿ ಉಪಸ್ಥಿತರಿದ್ದರು. ಸ್ನಾನಘಟ್ಟ ಬಳಿ ಫ್ಲಡ್‌ ವಾಚ್‌, ಗೃಹರಕ್ಷಕ ದಳ ಹಾಗೂ ದೇಗುಲದ ಭದ್ರತಾ ಸಿಬಂದಿಗೆ ಪಹರೆ ಕರ್ತವ್ಯ ವೇಳೆ ವಿಶ್ರಾಂತಿ ಪಡೆಯಲು ತೊಂದರೆ ಆಗುತ್ತಿರುವ ಕುರಿತು ಜು.18ರಂದು ‘ಸುದಿನ’ದಲ್ಲಿ ವರದಿ ಪ್ರಕಟಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next