Advertisement

Kumar Bangarappa ಬಿಜೆಪಿ ಬಿಡಲ್ಲ: ಸಂಸದ ರಾಘವೇಂದ್ರ

11:18 PM Feb 25, 2024 | Team Udayavani |

ಶಿವಮೊಗ್ಗ: ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಬಿಜೆಪಿ ಸಿದ್ಧಾಂತ ಒಪ್ಪಿದ್ದಾರೆ. ಬಿಜೆಪಿಯಲ್ಲೇ ಇದ್ದಾರೆ. ಮುಂದೆ ಕೂಡ ಬಿಜೆಪಿಯಲ್ಲೇ ಇರುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಕುಮಾರ್‌ ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ ಆಹ್ವಾನ ಕುರಿತು ಅವರು ಮಾತನಾಡಿ, ಕುಮಾರ್‌ ಅವರು ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಬಿಜೆಪಿ
ಯಲ್ಲೇ ಇರಲಿದ್ದಾರೆ ಎಂದರು.

ದೇವಾಲಯ ಆದಾಯದಲ್ಲಿ ಶೇ.10ರಷ್ಟು ತೆಗೆಯಲು ಸರಕಾರ ಮುಂದಾಗಿತ್ತು. ಇದಕ್ಕಾಗಿ ಹಿಂದೂ ಧಾರ್ಮಿಕ ದತ್ತಿ ಮಸೂದೆಯನ್ನು ಸರಕಾರ ಮಂಡನೆ ಮಾಡಿತ್ತು. ದೇವರ ದಯೆಯಿಂದ ಈ ಮಸೂದೆ ಪಾಸಾಗಿಲ್ಲ. ಸರಕಾರದ ವಿರುದ್ಧ ವಿಧಾನಪರಿಷತ್‌ನಲ್ಲಿ ಮತ ಬಿದ್ದಿವೆ. ಇನ್ನಾದರೂ ಸರಕಾರ ಜನ ವಿರೋಧಿ ನಡವಳಿಕೆಗಳಿಂದ ದೂರ ಆಗಬೇಕು ಎಂದವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next