Advertisement

ಕೋಲ್ಕತ್ತಾದಲ್ಲಿ ಕುಲದೀಪ್-ಸಿರಾಜ್ ಬಿಗುದಾಳಿ: 215ಕ್ಕೆ ಗಂಟುಮೂಟೆ ಕಟ್ಟಿದ ಲಂಕಾ

04:51 PM Jan 12, 2023 | Team Udayavani |

ಕೋಲ್ಕತ್ತಾ: ಬಹಳ ಸಮಯದ ನಂತರ ಏಕದಿನ ತಂಡದಲ್ಲಿ ಸ್ಥಾನ ಪಡೆದ ಕುಲದೀಪ್ ಯಾದವ್ ಕಮಾಲ್ ಮಾಡಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬಿಗು ದಾಳಿ ಸಂಘಟಿಸಿದ ಎಡಗೈ ಸ್ಪಿನ್ನರ್ ಮೂರು ವಿಕೆಟ್ ಕಿತ್ತು ಸಂಭ್ರಮಿಸಿದರು.

Advertisement

ಬ್ಯಾಟಿಂಗ್ ಗೆ ಹೆಸರಾದ ಪಿಚ್ ನಲ್ಲಿ ವೈಫಲ್ಯ ಕಂಡ ಲಂಕಾ 39.4 ಓವರ್ ಗಳಲ್ಲಿ 215 ರನ್ ಗೆ ಆಲೌಟಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಂಕಾ 29 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ನುವನಿದು ಫರ್ನಾಂಡೋ ಮತ್ತು ಕುಸಾಲ್ ಮೆಂಡಿಸ್ ಉತ್ತಮ ಜೊತೆಯಾಟವಾಡಿದರು. ಮೊದಲ ಪಂದ್ಯವಾಡುತ್ತಿರುವ ನುವನಿದು ಅರ್ಧ ಶತಕ ಬಾರಿಸಿದರು.

ಇದನ್ನೂ ಓದಿ:ಸ್ಯಾಂಟ್ರೋ ರವಿ ಬೆನ್ನು ಹತ್ತಿ ಹೆಬ್ರಿಗೆ ಬಂದ ಮೈಸೂರು ಪೊಲೀಸರು

102 ರನ್ ಗೆ ಎರಡನೇ ವಿಕೆಟ್ ಕಳೆದುಕೊಂಡ ಲಂಕಾ ನಂತರ ಸತತ ವಿಕೆಟ್ ಕಳೆದುಕೊಂಡಿತು. 126 ರನ್ ಆಗುವಷ್ಟರಲ್ಲಿ ಆರು ವಿಕೆಟ್ ಉರುಳಿತ್ತು. ಆದರೆ ಕೊನೆಯಲ್ಲಿ ಹಸರಂಗ 21 ರನ್, ವೆಲ್ಲಲಗೆ 32 ರನ್, ಕರುಣರತ್ನೆ ಮತ್ತು ರಜಿತಾ ತಲಾ 17 ರನ್ ಮಾಡಿದರು. ಇದರಿಂದ ಲಂಕಾ 200ರ ಗಡಿ ದಾಟಿತು.

Advertisement

ಭಾರತದ ಪರ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next