Advertisement

ಕುಳಾಯಿ ಜಂಕ್ಷನ್‌ ಹೆದ್ದಾರಿ ಗುಂಡಿಗೆ ಶಾಶ್ವತ ಮುಕ್ತಿ: ಡಾ|ಭರತ್‌ ಶೆಟ್ಟಿ

10:27 PM Jan 22, 2020 | mahesh |

ಕುಳಾಯಿ: ರಾಷ್ಟ್ರೀಯ ಹೆದ್ದಾ ರಿಯ ಕುಳಾಯಿ ಜಂಕ್ಷನ್‌ನಲ್ಲಿ ಹೆದ್ದಾರಿ ರಸ್ತೆ ಅನೇಕ ವರ್ಷಗಳಿಂದ ಹಾಳಾಗಿದ್ದು, ವಾಹನ ಸವಾರರು, ಪ್ರಯಾ ಣಿಕರು ತೊಂದರೆ ಅನುಭವಿಸುವುದರ ಜತೆಗೆ ಹೆದ್ದಾರಿಯ ಸುಗಮ ಸಂಚಾರಕ್ಕೂ ತಡೆಯಾಗುತ್ತಿತ್ತು. ಇದೀಗ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ್ದು, ಸ್ಥಳೀಯರ ಬಹು ದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಡಾ|ಭರತ್‌ ಶೆಟ್ಟಿ ವೈ. ಹೇಳಿದರು.

Advertisement

ಬುಧವಾರ ಕುಳಾಯಿ ಜಂಕ್ಷನ್‌ನ ಕಾಂಕ್ರೀಟ್‌ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಹೊಂಡ, ಗುಂಡಿಗಳು ಬಿದ್ದು ವಾಹನಗಳ ಬಿಡಿ ಭಾಗಗಳಿಗೆ ಹಾನಿ ಯಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ರಿûಾ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದರು. ಸಂಸದರ ಜತೆ ಚರ್ಚಿಸಿ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್‌ ಹಾಕಲು ಸೂಚಿಸಿದ್ದೆ. ಇದೀಗ ರಸ್ತೆ, ಸುಸಜ್ಜಿತ ಮಳೆ ನೀರು ಹರಿಯಲು ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಫ‌ುಟ್‌ಪಾತ್‌ ನಿರ್ಮಿಸಲಾಗುವುದು.ಬೈಕಂಪಾಡಿ ಕೈಗಾರಿಕಾ ತಿರುವು ಜಂಕ್ಷನ್‌, ಕೂಳೂರು ಹೆದ್ದಾರಿ ಬಳಿ ಕೂಡ ಇದೇ ಮಾದರಿಯಲ್ಲಿ ಅಭಿವೃದ್ಧಿಗೆ ಸೂಚಿಸಲಾಗಿದೆ ಎಂದರು.

ಪಾಲಿಕೆ ಸದಸ್ಯ ವರುಣ್‌ ಚೌಟ, ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್‌ ರಾಜ್‌ ಕೃಷ್ಣಾಪುರ, ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು , ಪಾಲಿಕೆ ಸದಸ್ಯೆ ವೇದಾವತಿ, ಬಿಜೆಪಿ ಮುಖಂಡರಾದ ವಿಠಲ ಸಾಲ್ಯಾನ್‌, ರಮೇಶ್‌ ಅಳಪೆ, ಯೋಗೀಶ್‌ ಸನಿಲ್‌, ಭರತ್‌ ಶೆಟ್ಟಿ, ಗಂಗಾಧರ ಬಂಜನ್‌, ಎಂ.ಟಿ. ಸಾಲ್ಯಾನ್‌, ಸುನಿಲ್‌ ಕುಳಾಯಿ, ಕೆ.ಪಿ. ಚಂದ್ರಶೇಖರ್‌, ಜಯರಾಂ ಕುಳಾಯಿ, ಮಂಗಳೂರು ಉತ್ತರ ಸಂಚಾರಿ ಠಾಣೆಯ ಸಿ.ಐ. ಮೋಹನ್‌ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

ಏಕಮುಖ ಸಂಚಾರ ಪ್ರಸ್ತಾವ
ಕುಳಾಯಿ ಮಾರ್ಗವಾಗಿ ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌ ಸಹಿತ ಬೃಹತ್‌ ಕಂಪೆನಿಗಳಿಗೆ ಭಾರೀ ಗಾತ್ರದ ಟ್ರಕ್‌ಗಳು, ಟ್ಯಾಂಕರ್‌ ಓಡಾಡುತ್ತಿದ್ದು, ಅಪಾಯಕಾರಿಯಾಗಿದೆ. ಈ ಪ್ರದೇಶ ಹಲವು ಬಡಾವಣೆಗಳನ್ನು ಹೊಂದಿದ್ದು, ಟ್ರಕ್‌, ಟ್ಯಾಂಕರ್‌ಗಳನ್ನು ನಿಷೇ ಧಿಸಬೇಕೆಂಬ ಮನವಿ ಸಾರ್ವಜನಿಕರಿಂದ ಕೇಳಿ ಬಂತು. ಸುರತ್ಕಲ್‌ ಜಂಕ್ಷನ್‌ನಲ್ಲಿ ವಾಹನ ಒತ್ತಡ ಅಧಿ ಕವಾಗುವುದರಿಂದ ಕುಳಾಯಿ, ಸುರತ್ಕಲ್‌ನಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಸ್ತಾವ ವ್ಯಕ್ತವಾಯಿತು. ಉತ್ತರ ಸಂಚಾರ ಠಾಣೆಯ ಅ ಧಿಕಾರಿಗಳಿಗೆ ಈ ಬಗ್ಗೆ ಮುಂಜಾಗ್ರತಾ ಕ್ರಮ ಕ್ರಮಗೊಳ್ಳುವಂತೆ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next