Advertisement

Subrahmanya Temple ಕುಕ್ಕೆಗೆ ತೆಲಂಗಾಣ ಸಚಿವ ಶ್ರೀನಿವಾಸ ರೆಡ್ಡಿ; 1 ಕೋಟಿ ರೂ. ಸಮರ್ಪಣೆ

11:14 PM Dec 19, 2023 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆಲಂಗಾಣ ಸರಕಾರದ ಕಂದಾಯ ಸಚಿವ ಪೊಂಗುಲೆಟಿ ಶ್ರೀನಿವಾಸ್‌ ರೆಡ್ಡಿ ಮಂಗಳವಾರ ಭೇಟಿ ನೀಡಿದರು. ಈ ವೇಳೆ ಅವರು 1 ಕೋಟಿ ರೂ.ಗಳನ್ನು ಅನ್ನದಾನಕ್ಕೆ ನೀಡಿ ತನ್ನ ಹರಕೆ ಸೇವೆ ಪೂರೈಸಿದರು.

Advertisement

ಮಗಳ ಮದುವೆಗಾಗಿ ಮಾಡಿದ ಪ್ರಾರ್ಥನೆ ಫ‌ಲಿಸಿದ ಹಿನ್ನಲೆಯಲ್ಲಿ ಈ ಸೇವೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಸಚಿವರ ಮಗಳು, ಅಳಿಯ, ಸಹೋದರ ಪ್ರಸಾದ್‌ ರೆಡ್ಡಿ ಹಾಗೂ ತಿರುಪತಿಯಲ್ಲಿ ಪ್ರೊಫೆಸರ್‌ ಆಗಿರುವ ಸುಳ್ಯದ ಜಾಲ್ಸೂರಿನ ಗಣಪತಿ ಭಟ್‌ ಜತೆಗಿದ್ದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸಮಿತಿ ಸದಸ್ಯರಾದ ಪಿ.ಜಿ.ಎಸ್‌.ಎನ್‌. ಪ್ರಸಾದ್‌, ಪ್ರಸನ್ನ , ಶ್ರೀವತ್ಸ, ಲೋಕೇಶ್‌ ಮುಂಡೊಕಜೆ, ಶೋಭಾ ಗಿರಿಧರ್‌, ವನಜಾ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next