Advertisement

ಕುಕ್ಕೆ ಸುಬ್ರಹ್ಮಣ್ಯ:ಸಚಿವೆ ಉಮಾಶ್ರೀ ಭೇಟಿ,ಆಶ್ಲೇಷಾ ಬಲಿಸೇವೆಸಲ್ಲಿಕೆ

02:26 PM Feb 05, 2018 | Team Udayavani |

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ರವಿವಾರ ಭೇಟಿ ನೀಡಿದರು.

Advertisement

ಬೆಳಗ್ಗೆ ದೇಗುಲಕ್ಕೆ ಆಗಮಿಸಿ, ದೇವರಿಗೆ ಆಶ್ಲೇಷಾ ಬಲಿ ಸೇವೆ ಸಂಕಲ್ಪ ಮಾಡಿದ ಸಚಿವರು, ಬಳಿಕ ಆಶ್ಲೇಷಾ ಬಲಿ ಸೇವೆ ನೆರವೇರಿಸಿ, ಶ್ರೀ ದೇವರ ದರುಶನ ಪಡೆದರು. ದೇಗುಲದ ಪ್ರಧಾನ ಅರ್ಚಕರು ಸಚಿವರಿಗೆ ಶಾಲು ಹೊದೆಸಿ ಪ್ರಸಾದ ನೀಡಿದರು. ಹೊಸಳಿಗಮ್ಮ ದೇವಿಯ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

ಕ್ಷೇತ್ರಕ್ಕೆ ದಿಢೀರ್‌ ಆಗಮಿಸಿದ ಸಚಿವರನ್ನು ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್‌. ರವೀಂದ್ರ ಸ್ವಾಗತಿಸಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ ಜಯರಾಮ, ತಾ.ಪಂ. ಸದಸ್ಯ ಅಶೋಕ್‌ ನೆಕ್ರಾಜೆ, ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಡಿ. ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯೆ ವಿಮಲಾ ರಂಗಯ್ಯ, ಕೆ.ಎಸ್‌.ಎಸ್‌. ಕಾಲೇಜು ಪ್ರಾಚಾರ್ಯ ಪ್ರೊ | ರಂಗಯ್ಯ ಶೆಟ್ಟಿಗಾರ್‌, ಉಷಾ ಜಯರಾಮ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next