Advertisement

ಕುಕ್ಕೆ: ಇಂದು ಪಂಚಮಿ ರಥೋತ್ಸವ; ತೈಲಾಭ್ಯಂಜನ

01:01 AM Dec 08, 2021 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಬುಧವಾರ ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ.

Advertisement

ಮಧ್ಯಾಹ್ನ ಪಲ್ಲಪೂಜೆ, ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ಹೊರಾಂಗಣದಲ್ಲಿ ಜರಗಲಿದೆ. ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆ ಬೆಡಿ’ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ ಷಣ್ಮುಖ ಪ್ರಸಾದ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲೂ ಭೋಜನ ಪ್ರಸಾದವನ್ನು ವಿತರಿಸಲಾಗುತ್ತದೆ.

3 ದಿನ ಪ್ರಾರ್ಥನೆ ಇಲ್ಲ
ಚಂಪಾ ಷಷ್ಠಿ ಉತ್ಸವದ ಪ್ರಧಾನ ಮೂರು ದಿನಗಳಾದ ಚೌತಿ, ಪಂಚಮಿ ಹಾಗೂ ಷಷ್ಠಿ ಯಂದು ದೇವಸ್ಥಾನದಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಪಂಚಾಮೃತ ಮಹಾ ಭಿಷೇಕ ಸೇವೆ ಕೂಡ ಈ ದಿನಗಳಲ್ಲಿ ನಡೆ ಯುವುದಿಲ್ಲ. ಷಷ್ಠಿಯಂದು ಆಶ್ಲೇಷಾ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳೂ ಇರುವುದಿಲ್ಲ.

ರಥಗಳಿಗೆ ಶಿಖರ ಮುಹೂರ್ತ
ಕ್ಷೇತ್ರದ ಚಂಪಾಷಷ್ಠಿ ಮಹೋತ್ಸವ ಸಂದರ್ಭ ಎಳೆಯುವ ಎರಡು ರಥಗಳಿಗೆ ಶಿಖರ ಮುಹೂರ್ತ ಮಂಗಳವಾರ ನೆರವೇರಿತು. ದೇವಸ್ಥಾನದ ಪುರೋಹಿತ ಮಧೂಸೂದನ ಕಲ್ಲೂರಾಯ ಪೂಜಾ ವಿಧಿ ನೆರವೇರಿಸಿದರು. ಬಳಿಕ ಎರಡು ರಥಗಳಿಗೆ ಶಿಖರ ಅಳವಡಿಸಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀವತ್ಸಾ, ರಾಜೇಶ್‌ ಎನ್‌.ಎಸ್‌., ಗೋಪಿನಾಥ್‌ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಮದ್ಯ ಮಾರಾಟ ನಿಷೇಧ
ಮಂಗಳೂರು: ಷಷ್ಠಿ ಮಹೋತ್ಸವ ಪ್ರಯುಕ್ತ ಕುಕ್ಕೆಯಲ್ಲಿ ಅಪಾರ ಭಕ್ತರು ಸೇರುವುದರಿಂದ ಪರಿಸರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಇಂಚಾಡಿ ಬಳಿಯ ಮದ್ಯ ಮಾರಾಟದ ಕೇಂದ್ರಗಳನ್ನು ಡಿ. 8ರ ಬೆಳಗ್ಗೆ 6ರಿಂದ ಡಿ. 9ರ ಮಧ್ಯರಾತ್ರಿ 12 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next