Advertisement

ಕನ್ನಡ, ಕನ್ನಡಿಗ, ಕರ್ನಾಟಕತ್ವ ಪ್ರತಿಯೊಬ್ಬರಲ್ಲೂ ನೆಲೆಗೊಳ್ಳಬೇಕು: ಶಾಸಕ ಎಚ್. ಸಿ ಬಾಲಕೃಷ್ಣ

02:02 PM Nov 19, 2023 | Team Udayavani |

ಕುದೂರು: ನಮ್ಮ ನಾಡು ನುಡಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಪರಿಸರದ ಸಂಸ್ಕೃತಿಯನ್ನು ಸದಾ ಮೈಗೂಡಿಸಬೇಕು. ನಾವು ಹೇಗೆ ಪಿತೃಪಕ್ಷದ ಸಂದರ್ಭ ನಮ್ಮ ಹಿರಿಯರನ್ನು ನೆನೆಯುತ್ತೇವೋ, ಹಾಗೆಯೇ ಕರ್ನಾಟಕದ ರಚನೆಯ ಸಂದರ್ಭದಲ್ಲಿ ದುಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಮಾಗಡಿಯ ಶಾಸಕ ಎಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟರು.

Advertisement

ನಮ್ಮ ಮುಂದಿನ ಜನಾಂಗ ಅಭಿಮಾನ ಪೂರಕವಾಗಿ ಕನ್ನಡ, ಕನ್ನಡಿಗ, ಕರ್ನಾಟಕತ್ವ ಹೃದಯದಲ್ಲಿ ಸದಾ ಜಾಗೃತವಾಗಿರಬೇಕು. ಆಗ ಮಾತ್ರ ಈ ರಾಜ್ಯ ರಚನೆಯ ಸಾರ್ಥಕತೆ ಬರುವುದು ಎಂದರು.

ಶ್ರೀಮತಿ ನೀಲಮ್ಮ ಕುದೂರು ಶ್ರೀ ಕೆಎ ಸತ್ಯನಾರಾಯಣ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ, ವಿವಿಧ ಸಹಪಠ್ಯ ಚಟುವಟಿಕೆಗಳ ಹಾಗೂ ಕಲಾ ಜ್ಯೋತಿ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಮಾಗಡಿಯ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ತುಂಬಾ ಬುದ್ಧಿವಂತಿಕೆ ಕೌಶಲ್ಯ ಹೆಚ್ಚಿರುತ್ತದೆ. ಆದರೆ  ಅವರ ಅಭಿವ್ಯಕ್ತಿ ವಿಧಾನದಿಂದ ಹಿಂಜರಿಕೆಯ ತೊಡಕು ಉಂಟಾಗುತ್ತಿದೆ ಎಂದು ಹೇಳಿದರು.

ನೀವು ಯಾವಾಗಲೂ ಹಿಂಜರಿಕೆಯನ್ನು ತೊಡೆದು ಮುನ್ನುಗ್ಗುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಉನ್ನತ ಶಿಕ್ಷಣ ಎಲ್ಲರಿಗೂ ಮೂಲಭೂತವಾದ ಶಿಕ್ಷಣವಾಗಿ ರೂಪಿಸಬೇಕಾದ ಅವಶ್ಯಕತೆಯೂ ಇದೆ ಎಂದರು.

Advertisement

ಸರ್ಕಾರಿ ಶಾಲಾ ಕಾಲೇಜುಗಳು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆಂದು ನಡೆಯುತ್ತಾ, ಕುದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆಗೊಂಡು 25 ವರ್ಷ ಕಳೆದಿದೆ. ಹಾಗಾಗಿ ಈ ಸವಿನೆನಪಿಗೆ ಕಾಲೇಜಿನಲ್ಲಿ ರಚತ ಮಹೋತ್ಸವವನ್ನು ಮುಂದಿನ ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸೋಣವೆಂದ ಅವರು, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಾಲೇಜಿನ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂದು ಭರವಸೆಯಿತ್ತರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಟಿ ನೇತ್ರಾವತಿ ಗೌಡ ವಿದ್ಯಾರ್ಥಿಗಳನ್ನು ಕುರಿತು ಕನ್ನಡದ ಮಹತ್ವ, ಕನ್ನಡಿಗರ ಅಭಿಮಾನದ ಪರಂಪರೆಯ ಹಿನ್ನೆಲೆ, ಕನ್ನಡದ ಪ್ರಸ್ತುತ ಸಂದರ್ಭದಲ್ಲಿ ಸ್ಥಿತಿ, ಕನ್ನಡ ಭಾಷೆಯ ಧ್ವನ್ಯಾಂಗ ವ್ಯವಸ್ಥೆ, ಕನ್ನಡಿಗರ ಸಾರ್ವಭೌಮತ್ವವನ್ನು ತಿಳಿಸಿದರು.

ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಭವಿಷ್ಯವನ್ನು ಎದುರಿಸುತ್ತಿರುವ ಆತಂಕದ ಕ್ಷಣಗಳನ್ನು ನುಡಿಯುತ್ತಾ, ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯ ಮನಸ್ಸನ್ನು ದೃಢೀಕರಿಸುತ್ತಾ, ಆತ್ಮವಿಶ್ವಾಸದಿಂದ ತನ್ಮಯತೆಯನ್ನು ಹೊಂದುವಂಥ ಸ್ವಭಾವವನ್ನ ಹೊಂದಬೇಕೆಂದು ತೇಜಸ್ವಿಯವರ ಕರ್ವಾಲೋ ಕಾದಂಬರಿಯ ಅನುಭವದ ಜೊತೆಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುಮೂರ್ತಿ ಕೆ.ಎಚ್   ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇಂದಿನ ದಿನಮಾನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸುವಲ್ಲಿ ಕಾರ್ಯಯೋನ್ಮುಖರಾಗಿದ್ದೇವೆ. ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ, ಸಮಾಜದಲ್ಲಿ ದೃಢವಾಗಿ ನಿಲ್ಲುವ ಆತ್ಮವಿಶ್ವಾಸವನ್ನು ಮತ್ತು ಶಿಸ್ತನ್ನು ರೂಢಿಸುವಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿರುವುದನ್ನು ವಿವರಿಸಿದರು. ಕಾಲೇಜಿನ ಹಲವು ಕಾರ್ಯಯೋಜನೆಯ ಬಗ್ಗೆ ಶಾಸಕರಿಗೆ ಕಾಲೇಜಿನ ಅಭಿವೃದ್ಧಿಯ ಸದಸ್ಯರಿಗೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕುದೂರು ಗ್ರಾಮದ ಮುಖಂಡರಾದ ಕೆಇಬಿ ರಾಜಣ್ಣ, ಹನುಮಂತಪ್ಪ, ಪ್ರಕಾಶ್, ಬೋರ್ವೆಲ್ ಗಿರೀಶ್, ಜಯರಾಮಣ್ಣ, ಯತೀಶ್, ವಿನಯ್, ಮರಿಗೌಡ್ರು ಯಾಸಿನ್, ಕುಮಾರ್, ಕಾಲೇಜಿನ ಬೋಧಕ ಮತ್ತು ಬೋಧಕೇತರು ಮತ್ತು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಮುರಳಿ ಕೂಡ್ಲೂರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ದೇವರಾಜ್ ಸ್ವಾಗತಿಸಿ ಜಗದೀಶ್ ಜೆ ಹೊಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next