Advertisement

ಕುಡುಪಲಿ: ದೇವಿ ಪುರಾಣ ಸಂಪನ್ನ

12:53 PM Oct 13, 2019 | Suhan S |

ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ಆರಾಧ್ಯ ದೇವತೆ ಶ್ರೀದ್ಯಾಮಮ್ಮನ ದೇವಸ್ಥಾನದಲ್ಲಿ 9 ದಿನ ನಡೆದ ದೇವಿ ಪುರಾಣ ಸಂಪನ್ನಗೊಂಡಿತು.

Advertisement

ದ್ಯಾಮಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಪುರಾಣ ಮುಕ್ತಾಯಗೊಂಡ ಬಳಿಕ 108 ಮುತೈದೆಯರಿಗೆ ಉಡಿ ತುಂಬಲಾಯಿತು.

ಇದೇ ವೇಳೆ 18 ದೇವತೆಗಳ ಅವತಾರದಲ್ಲಿ ಗ್ರಾಮದ ಬಾಲಕಿಯರು ವೇಷತೊಟ್ಟು ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುರೇಶಾಚಾರ್ಯ ದೊಡ್ಡಗುಬ್ಬಿ ಪುರಾಣ ಪ್ರವಚನ ಮಾಡಿದರು. ಆನಂದಪ್ಪ ಕೂಲಿ ಪುರಾಣ ಪಠಣ ಮಾಡಿದರು. ನಾಗಲಿಂಗಚಾರಿ ಅಂತರವಳ್ಳಿ ಸಂಗೀತ ನೀಡಿದರು. ಗಣೇಶ ದಂಡಗಿಹಳ್ಳಿ ತಬಲಾ ಸಾಥ್‌ ನೀಡಿದರು.

ಈ ಸಂದರ್ಭದಲ್ಲಿ ದ್ಯಾಮಮ್ಮ ದೇವಸ್ಥಾನ ಕಮೀಟಿಯವರು, ಗ್ರಾಮದ ಭಕ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next