Advertisement

ಕಟೀಲ್, ಹೆಗಡೆ, ಕಾಗೆ ಆಯ್ತು; ಅಧಿಕಾರಿಗೆ ಕುಡುಚಿ ಶಾಸಕರ ಅವಾಜ್! 

03:09 PM Jan 10, 2017 | Sharanya Alva |

ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ ಎಂದು ಬೆಂಕಿಯುಗುಳಿದ್ದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ವೈದ್ಯರ ಮೇಲೆ ಸಂಸದ ಅನಂತ್ ಕುಮಾರ್ ಹೆಗಡೆ ಹಲ್ಲೆ ನಡೆಸಿದ ಪ್ರಕರಣ, ಶಾಸಕ ರಾಜು ಕಾಗೆ ಸಂಬಂಧಿಕರ ಗೂಂಡಾಗಿರಿ ಪ್ರಕರಣದ ಬೆನ್ನಲ್ಲೇ ಇದೀಗ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಕುಡುಚಿ ಶಾಸಕ ಪಿ.ರಾಜೀವ್ ಅವರು ಅಧಿಕಾರಿಗೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಕುಡುಚಿ ಶಾಸಕ ಪಿ.ರಾಜೀವ್ ಅವರು ತಹಸೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ಜಾಗದ ಸರ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರಿಗೆ ಅವಾಜ್ ಹಾಕಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿರುವುದನ್ನು ಖಾಸಗಿ ಮಾಧ್ಯಮವೊಂದು ಪ್ರಸಾರ ಮಾಡಿದೆ.

ನಿನಗೆ ಗಂಡಸುತನ ಇದ್ದರೆ ಇಲ್ಲಿ ಕೆಲಸ ಮಾಡು, ಇಲ್ಲದಿದ್ದರೆ ಹೋಗು ಮಗನೆ ಎಂದು ಅವಾಜ್ ಹಾಕಿರುವುದು ಸೆರೆಯಾಗಿದೆ ಎಂದು ವರದಿ ವಿವರಿಸಿದೆ.

ಇತ್ತೀಚೆಗಷ್ಟೇ ದಕ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಸಂಸದ ಕಟೀಲ್ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರೆ, ಮತ್ತೊಂದೆಡೆ ಉಕದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿ ವಿವಾದಕ್ಕೀಡಾಗಿದ್ದರು. ಬಳಿಕ ಬಿಜೆಪಿಯ ಕಾಗವಾಡ ಶಾಸಕ ರಾಜು ಕಾಗೆ ಬೆಂಬಲಿಗರು ವಿವೇಕ್ ಶೆಟ್ಟಿ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next