Advertisement

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾನು ಸಚಿವ ಆಕಾಂಕ್ಷಿಯಲ್ಲ: ಪಿ. ರಾಜೀವ್ ಹೇಳಿಕೆ

08:34 AM Feb 13, 2020 | keerthan |

ದಾವಣಗೆರೆ: ನಾನು ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕನಾಗಿದ್ದೇನೆ. ಪಕ್ಷದ ಸಿದ್ಧಾಂತ ಒಪ್ಪಿ, ನಿಷ್ಠೆ ತೋರಿಸಬೇಕಿದೆ. ನಾನು ಸಚಿವ ಆಕಾಂಕ್ಷಿಯಲ್ಲ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ವಿಚಾರದಲ್ಲೂ ಗೊಂದಲವಿಲ್ಲ. ರಾಮುಲು ಎಲ್ಲೂ ಡಿಸಿಎಂ ಮಾಡಿ ಎಂದು ಕೇಳಿಲ್ಲ ಎಂದರು.

ಸರ್ಕಾರ ರಚನೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಬೆಳಗಾವಿ ಪ್ರಮುಖ ಪಾತ್ರವಹಿಸಿದೆ. ಹಾಗಾಗಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಆದ್ಯೆತೆ  ನೀಡಲಾಗಿದೆ ಅಷ್ಟೇ ಎಂದು ಪಿ. ರಾಜೀವ್ ಹೇಳಿದರು.

ಕುಡಚಿ ಶಾಸಕರಾಗಿರುವ ಪಿ ರಾಜೀವ್ 2013ರಲ್ಲಿ ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ ಪಕ್ಷದಿಂದ ಕುಡಚಿಯಿಂದ ಗೆಲುವು ಸಾಧಿಸಿದ್ದರು. ನಂತರ 2018ರಲ್ಲಿ ಬಿಜೆಪಿ ಸೇರಿ ಕಮಲ ಚಿಹ್ನೆಯಡಿಯಲ್ಲಿ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next