Advertisement

ಕರ್ನಾಟಕ ರಾಜ್ಯಪಾಲರ ಅವಸರದ ಕ್ರಮದಿಂದ ಕುದುರೆ ವ್ಯಾಪಾರ: ಡಿಎಂಕೆ

03:48 PM May 17, 2018 | Team Udayavani |

ಚೆನ್ನೈ : ‘ಸರಕಾರ ರಚಿಸುವಂತೆ ಬಿಜೆಪಿಯನ್ನು ಆಹ್ವಾನಿಸಿರುವ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಅವರ ಕ್ರಮವು ಅವಸರದ್ದೂ ಅಸಾಂವಿಧಾನಿಕವಾದದ್ದೂ ಆಗಿದೆ; ಇದರಿಂದ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಕಾಂಗ್ರೆಸ್‌ನ ಪ್ರಮುಖ ದಾಕ್ಷಿಣಾತ್ಯ ಮಿತ್ರನಾಗಿರುವ ಡಿಎಂಕೆ ಹೆಳಿದೆ. 

Advertisement

ಐಎನ್‌ಸಿ, ಜೆಡಿಎಸ್‌, ಬಿಎಸ್‌ಪಿ ಚುನಾವಣೋತ್ತರ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇರುವ ಹೊರತಾಗಿಯೂ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಿಜೆಪಿಗೆ ಸರಕಾರ ರಚಿಸುವಂತೆ ಆಹ್ವಾನಿಸಿರುವುದು ಸ್ವೇಚ್ಚಾಚಾರದ ಮತ್ತು ಅಸಂವಿಧಾನಿಕ ಕ್ರಮವಾಗಿದ್ದು ಇದು ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಲ್ಲದೆ ಪ್ರಜಾಸತ್ತೆಯ ಅಡಿಗಲ್ಲನ್ನು ನಾಶಪಡಿಸುವಂತಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಟ್ವೀಟ್‌ ಮಾಡಿದ್ದಾರೆ.

“ವಿಧಾನಸಭೆಯಲ್ಲಿ ಬಹುಮತವಿಲ್ಲದ ಭ್ರಷ್ಟ ಎಐಎಡಿಎಂಕೆ ಸರಕಾರವನ್ನು ರಕ್ಷಿಸುವ ಬಿಜೆಪಿ ಯತ್ನ ತಮಿಳು ನಾಡಿನ ಜನತೆಗೂ ಪರಿಚಿತವಾಗಿದೆ. ಅಂತೆಯೇ ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳು ಈ ರೀತಿಯ ಕ್ರಿಯೆಗಳಿಂದ ಬೆದರಿಕೆಗೆ ಗುರಿಯಾಗಿವೆ’ ಎಂದು ಸ್ಟಾಲಿನ್‌ ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next