Advertisement

ಯುಜಿಸಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಗೆ ಮುಕ್ತ ವಿವಿ ಚಿಂತನೆ

10:28 AM Jan 03, 2018 | Team Udayavani |

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅನುಮತಿ ನೀಡದಿದ್ದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಚಿಂತನೆ ನಡೆಸುತ್ತಿದೆ.

Advertisement

ಕರಾಮುವಿ ಮಾನ್ಯತೆ ನೀಡುವ ಸಂಬಂಧ ಯಾವ ಮನವಿಗಳಿಗೂ ಸ್ಪಂದಿಸದ ಯುಜಿಸಿ ವಿರುದ್ಧ ಕೆಎಸ್‌ಒಯು ಹೈಕೋರ್ಟ್‌ ಮೊರೆ
ಹೋಗಿತ್ತು. ಕೆಎಸ್‌ಒಯು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್‌ ಎರಡು ವಾರದೊಳಗೆ ಅನುಮತಿ
ನೀಡುವಂತೆ ಯುಜಿಸಿಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥ ಪಡಿಸಿತ್ತು. ಆದರೆ ನ್ಯಾಯಾಲಯ ನೀಡಿದ್ದ ಗಡುವು ಮುಗಿದರೂ, ಯುಜಿಸಿಯು
ಕೆಎಸ್‌ಒಯು ಮಾನ್ಯತೆ ನವೀಕರಣ ಮಾಡಿಲ್ಲ. ಹೀಗಾಗಿ ಯುಜಿಸಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಸಂಬಂಧ ಕೆಎಸ್‌
ಒಯು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. 

ಜ.3ರಂದು ಕೆಎಸ್‌ಒಯುನ ಆಡಳಿತ ಮಂಡಳಿ ಸಭೆ ನಡೆಯಬೇಕಿತ್ತು. ಆದರೆ ಕುಲಪತಿಗಳು ದೆಹಲಿಗೆ ಭೇಟಿ ನೀಡಿರುವುದರಿಂದ ಆಡಳಿತ ಮಂಡಳಿ ಸಭೆಯನ್ನು ಜ.10ಕ್ಕೆ ನಿಗದಿ ಮಾಡಲಾಗಿದೆ. ಕೆಎಸ್‌ಒಯು ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಯುಜಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಕೆಎಸ್‌ಒಯು ಕುಲಪತಿ ದೆಹಲಿಗೆ ಹೋಗಿದ್ದಾರೆ. ಅವರು ವಾಪಸ್‌ ಆದ ನಂತರವೇ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಹೀಗಾಗಿ ಆಡಳಿತ ಮಂಡಳಿ ಸಭೆಯನ್ನು ಮುಂದೂಡಿದ್ದೇವೆ. ನ್ಯಾಯಾಲಯದ ಆದೇಶಕ್ಕೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಮುಂದಿನ ನಡೆಯ ಬಗ್ಗೆ ಗಂಭೀರವಾಗಿಯೇ ಚಿಂತನೆ ಮಾಡಬೇಕಾಗುತ್ತದೆ ಎಂದು ಕೆಎಸ್‌
ಒಯು ಕುಲಸಚಿವ ಡಾ.ಕೆ.ಜಿ.ಚಂದ್ರಶೇಖರ್‌ “ಉದಯವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ ಯುಜಿಸಿ ಮಾನ್ಯತೆ ನವೀರಕಣ ಮಾಡದೇ ಇರುವುದರಿಂದ 2015-16, 2016-17 ಮತ್ತು
ಪ್ರಸಕ್ತ ಸಾಲಿನಲ್ಲಿ ಕೆಎಸ್‌ಒಯು ಯಾವುದೇ ಕೋರ್ಸ್‌ಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ. ಪ್ರಸಕ್ತ ಸಾಲಿನ ಮಾನ್ಯತೆ
ನವೀಕರಣಕ್ಕಾಗಿ ಕೆಎಸ್‌ಒಯು ಅನೇಕ ರೀತಿಯ ಕಸರತ್ತು ಮಾಡಿತ್ತು. ಕೆಎಸ್‌ಒಯು ಮಾನ್ಯತೆಗಾಗಿ ಪ್ರಧಾನಿಯವರಿಗೆ ಸಿಎಂ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಮಾನ್ಯತೆ ಸಿಕ್ಕಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next