Advertisement

Kshetrapati Trailer: ರೈತನ ಆಕ್ರೋಶದ ಜ್ವಾಲೆಯಲ್ಲಿ ಕ್ಷೇತ್ರಪತಿ

01:08 PM Aug 12, 2023 | Team Udayavani |

ನವೀನ್‌ ಶಂಕರ್‌ ನಾಯಕರಾಗಿರುವ “ಕ್ಷೇತ್ರಪತಿ’ ಚಿತ್ರ ಆ.18ಕ್ಕೆ ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದು ಹೊಸ ಬಗೆಯ ಕಂಟೆಂಟ್‌ ಇರುವ ಸಿನಿಮಾವಾಗಿ ಗಮನ ಸೆಳೆಯುವ ಸೂಚನೆ ನೀಡಿದೆ.

Advertisement

ರೆಗ್ಯುಲರ್‌ ಕಮರ್ಷಿಯಲ್‌ ಅಂಶಗಳಿಂದ ಮುಕ್ತವಾಗಿ ಕಾಣುವ ಟ್ರೇಲರ್‌ ನಲ್ಲಿ ರೈತನ ನೋವಿನ ಕಥೆಯನ್ನು ಬಿಚ್ಚಿಡಲಾಗಿದೆ. ಮುಗ್ಧ ರೈತರನ್ನು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಸಾಯುವ ಬಡವರು, ತಂದೆ-ಮಗನ ಬಾಂಧವ್ಯ… ಹೀಗೆ ಅನೇಕ ಅಂಶಗಳು ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿವೆ. ನಾಯಕ ನವೀನ್‌ ಶಂಕರ್‌ ಹೋರಾಟದ ಹಾದಿ ಮೂಲಕ ನ್ಯಾಯ ಕೇಳುವ ರೆಬೆಲ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ರೈತನಿಗೆ ಸಂಸ್ಕೃತದಲ್ಲಿ 21 ಹೆಸರುಗಳಿದೆ. ಅದರಲ್ಲಿ “ಕ್ಷೇತ್ರಪತಿ’ ಸಹ ಒಂದು. ರೈತನನ್ನು “ಕ್ಷೇತ್ರಪತಿ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಜೊತೆಗೆ ಇದೊಂದು ಅಪ್ಪ-ಮಗನ ಬಾಂಧವ್ಯ ಸಾರುವ ಸಿನಿಮಾವೂ ಹೌದು. ಗದಗಿನ ತಿಮ್ಮಾಪುರ ಎಂಬ ಊರಿನಲ್ಲೇ ಸಿನಿಮಾದ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ ಎನ್ನುವ ವಿವರಣೆಯನ್ನು ಕೂಡಾ ಚಿತ್ರತಂಡ ಟ್ರೇಲರ್‌ ರಿಲೀಸ್‌ ಇವೆಂಟ್‌ನಲ್ಲಿ ಹೇಳಿದೆ.

ರವಿ ಬಸ್ರೂರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌, ಅಚ್ಯುತ್‌ ಕುಮಾರ್‌, ರಾಹುಲ್‌ ಐನಾಪುರ, ಕೃಷ್ಣ ಹೆಬ್ಟಾಳೆ, ಶೈಲಶ್ರೀ ಅರಸ್‌, ನಾಟ್ಯ ರಂಗ, ಹರ್ಷ ಅರ್ಜುನ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಯುವ ಪ್ರತಿಭೆ ಶ್ರೀಕಾಂತ್‌ ಕಟಗಿ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next