Advertisement

ಸಿದ್ದು ಕುರಿತು  ಈಶ್ವರಪ್ಪ  ವಿವಾದಾತ್ಮಕ ಹೇಳಿಕೆ

11:06 PM Jul 31, 2021 | Team Udayavani |

ಬೆಂಗಳೂರು: ಒಂದು ಕಡೆ ಮಗ, ಮತ್ತೂಂದು ಕಡೆ ಅಳಿಯ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯ ಅವರನ್ನು ಅಪ್ಪ-ಅಮ್ಮ ಯಾರು ಎಂದು ಕೇಳಬೇಕಾಗಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಗೆ ಹೋಗಿ ಅದೇ ತವರು ಅಂತಾರೆ. ಚಾಮರಾಜ ಪೇಟೆಗೆ ಬಂದು ಅಳಿಯ ಎನ್ನುತ್ತಾರೆ ಎಂದರು.

ಸಿದ್ದರಾಮಯ್ಯ ಜನತಾಪಕ್ಷ, ಜನತಾದಳ, ಜೆಡಿಎಸ್‌ನಲ್ಲಿದ್ದವರು. ಅಲ್ಲಿಂದ ದೇವೇಗೌಡರು ಹಾಗೂ ಕುಮಾರಸ್ವಾಮಿರಿಗೆ ಟೋಪಿ ಹಾಕಿ ಕಾಂಗ್ರೆಸ್‌ ಸೇರಿದರು. ಅದರ ಮಧ್ಯೆ ಅದ್ಯಾವುದೋ ಪಕ್ಷ ಕಟ್ಟಿ ದರು. ಅದರ ಹೆಸರು ನನಗೆ ಹೇಳಲು ಬರುವುದಿಲ್ಲ ಎಂದು ಲೇವಡಿ ಮಾಡಿದರು.

ಪೂರ್ಣ ಬಹುಮತ:

ನಾಲ್ಕು ಬಾರಿ ಯಡಿಯೂರಪ್ಪ ಸಿಎಂ ಆದರೂ ಬಹುಮತ ಕೊಟ್ಟಿಲ್ಲ. ನಳಿನ್‌ ನೇತೃತ್ವದಲ್ಲಿ ಸಂಘಟನೆ ಕಟ್ಟುತ್ತಿದ್ದೇವೆ.  ಬೊಮ್ಮಾಯಿ  ನೇತೃತ್ವದಲ್ಲಿ  ಒಳ್ಳೆಯ ಸರಕಾರ ಕೊಟ್ಟು ಪೂರ್ಣ ಬಹುಮತ ಪಡೆಯುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next