Advertisement

ಕೃಷ್ಣಮೂರ್ತಿ ಸುಬ್ರಮಣಿಯನ್‌ ನೂತನ ಮುಖ್ಯ ಆರ್ಥಿಕ ಸಲಹೆಗಾರ

04:12 PM Dec 07, 2018 | udayavani editorial |

ಹೊಸದಿಲ್ಲಿ : ಐಐಟಿ-ಐಐಎಂ ನ ಉನ್ನತ  ಹಳೆ ವಿದ್ಯಾರ್ಥಿ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರನ್ನು ಮೂರು ವರ್ಷಗಳ ಅವಧಿಗೆ ಹೊಸ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

Advertisement

ಸುಬ್ರಮಣಿಯನ್‌ ಅವರು ಪ್ರಕೃತ ಇಂಡಿಯನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ ಇದರ ಎನಲಾಟಿಕಲ್‌ ಫಿನಾನ್ಸ್‌ ಸೆಂಟರ್‌ನಲ್ಲಿ ಹಣಕಾಸು ವಿಷಯದ ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು  ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರು ಶಿಕಾಗೋ ವಿಶ್ವವಿದ್ಯಾಲಯದ ಬೂತ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ ನಿಂದ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.

ಅರವಿಂದ ಸುಬ್ರಮಣಿಯನ್‌  ತಮ್ಮ ಅವಧಿ ಮುಗಿಯುವುದಕ್ಕೆ ಮುನ್ನವೇ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆ  ತೊರೆದ ಬಳಿಕ ಕೇಂದ್ರ ಸರಕಾರ ಕಳೆದ ಜೂನ್‌ 30ರಂದು ಈ ಹುದ್ದೆಗೆ ಡೆಪ್ಯುಟೇಶನ್‌ ನೆಲೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next