Advertisement

ಪ್ರವಾಹಕ್ಕೆ ಸಿಲುಕಿದ ಮೂವರು ಕುರಿಗಾಹಿಗಳ ರಕ್ಷಣೆ

07:27 AM Oct 23, 2019 | Team Udayavani |

ರಾಯಚೂರು: ನಾರಾಯಣಪುರ ಜಲಾಶಯದಿಂದ ಹೆಚ್ಚುವರಿ ನೀರು ಕೃಷ್ಣ ನದಿಗೆ ಹರಿಸಿದ್ದು ಪ್ರವಾಹಕ್ಕೆ ಸಿಲುಕಿದ್ದ ಮೂವರು ಕುರಿಗಾಹಿಗಳನ್ನು ರಕ್ಷಣಾ ಪಡೆ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.

Advertisement

ಸೋಮವಾರ ರಾತ್ರಿ ನದಿಗೆ 2.50 ಲಕ್ಷ ಕ್ಯೂಸೆಕ್ ಹರಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲೂ ಮಳೆ ಸುರಿದ ಪರಿಣಾಮ ಪ್ರವಾವ ಭೀತಿ ಹೆಚ್ಚಾಗಿತ್ತು. ದೇವದುರ್ಗ ತಾಲೂಕು ಚಿಂಚೋಡಿ ಗ್ರಾಮದ ನದಿ ನಡುಗಡ್ಡೆಯಲ್ಲಿ ಕುರಿಗಾಹಿಗಳು ಸಿಲುಕಿಕೊಂಡಿದ್ದರು.

ಅವರ ಜತೆಗೆ 89 ಕುರಿಗಳನ್ನು ಕೂಡ ಬೋಟ್ ಗಳ ಮೂಲಕ ದಡಕ್ಕೆ ಕರೆ ತರಲಾಗಿದೆ.

ಹೀಗಾಗಿ ಜಿಲ್ಲಾಡಳಿತ ನದಿಗೆ ಇಳಿಯದಂತೆ ನದಿ ಪಾತ್ರದ ಹಳ್ಳಿಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next