Advertisement

“ಕೃಷ್ಣ ಗಾರ್ಮೆಂಟ್ಸ್‌’ಚಿತ್ರೀಕರಣ ಪ್ರಾರಂಭ

09:52 PM Mar 24, 2018 | |

ಕಿರುತೆರೆ ನಟ ಭಾಸ್ಕರ್‌ ನೀನಾಸಂ ಅಭಿನಯದ “ಕೃಷ್ಣ ಗಾರ್ಮೆಂಟ್ಸ್‌’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿತು. ಕೆ.ಎಸ್‌.ರಕ್ಷಿತ್‌ ಎಂಟರ್‌ಟೈನ್‌ಮೆಂಟ್‌ ಹಾಗೂ ಸುಮುಖ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಕೆ.ಶ್ರೀàನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ “ಕೃಷ್ಣ ಗಾರ್ಮೆಂಟ್ಸ್‌” ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ನಿರ್ದೇಶಕರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜೊತೆಗೆ ಗೀತೆಗಳನ್ನೂ ನಿರ್ದೇಶಕರೇ ರಚಿಸಿದ್ದಾರೆ. ಚಿತ್ರದ ನಾಯಕ ಹಾಗೂ ನಾಯಕಿ ದೇವರಿಗೆ ನಮಿಸುವ ಮೊದಲ ದೃಶ್ಯಕ್ಕೆ ಜಯಕುಮಾರ್‌ ಆರಂಭ ಫ‌ಲಕ ತೋರಿದರು. ಕೆ.ಶ್ರೀನಿವಾಸಮೂರ್ತಿ ಹಾಗೂ ಕೆ.ಎಸ್‌.ರಶ್ಮಿ ಅವರು ಜೊತೆಗೂಡಿ ಕ್ಯಾಮೆರಾ ಚಾಲನೆ ಮಾಡಿದರು.

Advertisement

ಶ್ರವಣಬೆಳಗೊಳದಲ್ಲಿ ಚಿತ್ರೀಕರಣ ಶುರುವಾಗಿದ್ದು, ಇದೊಂದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಕಥೆ ಹೊಂದಿರುವ ಚಿತ್ರ. ಇಲ್ಲಿ ಪ್ರೀತಿಯ ಜರ್ನಿ ಕಥೆಯೂ ಒಳಗೊಂಡಿದ್ದು, ಹೊಸ ನಿರೂಪಣೆಯೊಂದಿಗೆ ಸಿನಿಮಾ ಮಾಡುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಈ ಹಿಂದೆ ನಿರ್ದೇಶಕ ಸಿದ್ದು ಪೂರ್ಣಚಂದ್ರ, “ಮನೆಮಗಳು”, “ಯಶೋಧರ” ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಆ ಅನುಭವದೊಂದಿಗೆ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು “ಹೆಮ್ಮರ’ ಎಂಬ ಚಿತ್ರಕ್ಕೂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇನ್ನು, “ಶ್ರೀಮಾನ್‌ ಶ್ರೀಮತಿ’ ಧಾರಾವಾಹಿಯ ನಟ ಭಾಸ್ಕರ್‌ ನೀನಾಸಂ ಅವರಿಗೆ ರಶ್ಮಿತಾ ನಾಯಕಿ. ಈ ರಶ್ಮಿತಾ ಅವರು ಕಿರುತೆರೆಯಿಂದ ಬಂದವರು. “ಬ್ರಹ್ಮಾಸ್ತ್ರ” ಧಾರಾವಾಹಿಯಲ್ಲಿ ರಶ್ಮಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಾಜೇಶ್‌ ನಟರಂಗ, ಹೆಚ್‌.ಎಂ.ಟಿ ವಿಜಯ್‌, ರಾಮರಾವ್‌, ಪ್ರಮಿಳಾ ಸುಬ್ರಮಣ್ಯ, ವರ್ಧನ್‌ ತೀರ್ಥಹಳ್ಳಿ, ಕಿರಣ್‌ ಹೊನ್ನಾವರ ಮುಂತಾದವರು ನಟಿಸುತ್ತಿದ್ದಾರೆ. ರಘು ಧನ್ವಂತ್ರಿ ಸಂಗೀತ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next