Advertisement

ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ: ಮತ್ತೆ ಮೂವರ ಬಂಧನ

11:15 PM Jan 04, 2023 | Team Udayavani |

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕ ಲಿಖೀತ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್‌ ಡಿವೈಸ್‌ ಮತ್ತು ಮೈಕ್ರೋಚಿಪ್‌ ತೆಗೆದುಕೊಂಡು ಪರೀಕ್ಷೆ ಬರೆದು ಅನಂತರ ನಾಶಪಡಿಸಿದ ಮೂವರು ಅಭ್ಯರ್ಥಿಗಳನ್ನು ಬುಧವಾರ ಬಂಧಿಸಲಾಗಿದೆ.

Advertisement

ಗೋಕಾಕ ತಾಲೂಕಿನ ಮಲ್ಲಾಪುರ ಪಿ.ಜಿ. ಗ್ರಾಮದ ಜನತಾ ಪ್ಲಾಟ್‌ ದಳವಾಯಿ ನಗರದ ಅಣ್ಣಪ್ಪ ಕೆಂಪಣ್ಣ ಮಾರವಾಡಿ (31), ಶಿವಾಪುರ ಗ್ರಾಮದ ಜಾನ್‌ ರಾಬರ್ಟ್‌ ಯಶವಂತ ಬಂಗೆನ್ನವರ (26 ) ಹಾಗೂ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಚಿದಾನಂದ ಚಿನ್ನಪ್ಪ ಮಾಡಲಗಿ (27) ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅವರು 2022, ಆ. 7ರಂದು ಪರೀಕ್ಷೆ ಬರೆದಿದ್ದರು. ಪರೀಕ್ಷೆ ವೇಳೆ ಎಲೆಕ್ಟ್ರಾನಿಕ್‌ ಡಿವೈಸ್‌, ಮೈಕ್ರೋಚಿಪ್‌ ಬಳಸಿ ಅನಂತರ ಈ ಎಲ್ಲವನ್ನೂ ನಾಶಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next