Advertisement

ಕೆ.ಪಿ. ಮಂಜುನಾಥ ಸಾಗರ್‌ ಅವರಿಗೆ ಗುಲ್ವಾಡಿ ಸ್ಮಾರಕ ಗೌರವ ಪುರಸ್ಕಾರ

12:04 PM Apr 14, 2017 | |

ಬಸ್ರೂರು: ಗುಲ್ವಾಡಿ ಗೌರವ ಪುರಸ್ಕಾರ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂತೋಷ್‌ ಕುಮಾರ್‌ ಗುಲ್ವಾಡಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದ ಕೀರ್ತಿ ಯಾಕೂಬ್‌ ಖಾದರ್‌ ಅವರಿಗೆ ಸಲ್ಲುತ್ತದೆ, ಗುಲ್ವಾಡಿಯ ಮಣ್ಣಿನಲ್ಲಿಯೇ ಒಂದು ವಿಶೇಷತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

Advertisement

ಅವರು ರವಿವಾರ ಸಂಜೆ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಗುಲ್ವಾಡಿಯ ತೋಟದ ಮನೆ ವಠಾರದಲ್ಲಿ ಪತ್ರಕರ್ತ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ಪಿ. ಮಂಜುನಾಥ ಸಾಗರ್‌ ಅವರಿಗೆ ಪತ್ರಕರ್ತ ಸಂತೋಷ್‌ ಕುಮಾರ್‌ ಗುಲ್ವಾಡಿ ಸ್ಮಾರಕ ಗೌರವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.

ಸಮ್ಮಾನ
ಗುಲ್ವಾಡಿ ಟಾಕೀಸ್‌ ನಿರ್ಮಾಣದ ಕಲಾತ್ಮಕ ಚಿತ್ರ ರಿಸರ್ವೇಶನ್‌ ಟ್ರೈಲರ್‌ ಹಾಗೂ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ರಿಸರ್ವೇಶನ್‌ ಚಿತ್ರದ ನಾಯಕಿ ಮಾನಸಿ ಅವರನ್ನು ಗೌರವಿಸಲಾಯಿತು. ನೂತನ ಗುಲ್ವಾಡಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಈ ಸಂದರ್ಭ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ| ಪ್ರಕಾಶ್‌ ತೋಳಾರ್‌, ನಾಗರಾಜ ಹೆಗ್ಡೆ ಗುಲ್ವಾಡಿ, ಭುಜಂಗ ಕೊರಗ ಮರವಂತೆ, ಸಂತೋಷ್‌ ಬಳ್ಕೂರು ಅವರನ್ನು ಸಮ್ಮಾನಿಸಲಾಯಿತು.

ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ನ್ಯಾಯವಾದಿ ಎ.ಎಸ್‌.ಎನ್‌. ಹೆಬ್ಟಾರ್‌, ಉದ್ಯಮಿ ದೇವೇಂದ್ರ ಬಡಿಗೇರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ.ಮುರಳೀಧರ್‌ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಮಹಮ್ಮದ್‌ ಆಲಿ  ಉಪಸ್ಥಿತರಿದ್ದರು.ಪ್ರತಿಷ್ಠಾನದ ಕಾರ್ಯದರ್ಶಿ ಯಾಕೂಬ್‌ ಖಾದರ್‌ ಗುಲ್ವಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next