Advertisement

ಸಮುದಾಯ ಹಂತಕ್ಕೆ ಕೋವಿಡ್ -19 ಸೋಂಕು ಇನ್ನೂ ಹರಡಿಲ್ಲ: ಸಚಿವ ಶ್ರೀರಾಮುಲು

02:25 PM Jul 07, 2020 | keerthan |

ಬೆಂಗಳೂರು: ಈವರೆಗೆ ಕೋವಿಡ್-19 ಸೋಂಕು ಸಮುದಾಯಕ್ಕೆ ಹರಡಿಲ್ಲ. ನಾವು ಇನ್ನು ಒಂದು ಹಾಗೂ ಎರಡನೇ ಹಂತದಲ್ಲಿದ್ದೇವೆ. ಮೂರನೇ ಹಂತಕ್ಕೆ ಇನ್ನೂ ಹೋಗಿಲ್ಲ. ಈ ವಿಚಾರವನ್ನು ಕೇಂದ್ರ ಅಧಿಕಾರಿಗಳ ತಂಡದ ಗಮನಕ್ಕೆ ತಂದಿದ್ದೇವೆ ಎಂದು‌ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ತಂಡ ತಿಳಿಸಿದೆ. ಕಂಟೈನ್ಮೆಂಟ್ ವಲಯಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಮತ್ತೊಮ್ಮೆ ಸಿಎಂ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಸಂಬಂಧ ಸಭೆ ನಡೆಸಿ ತೀರ್ಮಾನ‌ ಕೈಗೊಳ್ಳಲಾಗುವುದು. ಹಂತ ಹಂತವಾಗಿ ಅವರನ್ನು ಕಾಯಂ ಮಾಡಲಾಗುವುದು. ಈಗಾಗಲೇ ಅವರಿಗೆ ವೇತನ ಹೆಚ್ಚಿಸಲಾಗಿದ್ದು, ಅದರಂತೆ ಅವರನ್ನು ಕಾಯಂ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next