Advertisement

ಸಂಬಳ ನೀಡಲಿಲ್ಲ ಎಂದು ಲಾರಿಯನ್ನೇ ಕದ್ದೊಯ್ದ ಭೂಪ!

01:03 PM May 06, 2020 | Naveen |

ಕೊಟ್ಟಿಗೆಹಾರ: ಸಂಬಳ ನೀಡಲಿಲ್ಲ ವೆಂದು ಮಾಲೀಕನ ಲಾರಿಯನ್ನೇ ಕದ್ದೊಯ್ಯಲು ಪ್ರಯತ್ನಿಸಿದ್ದು ಕೊಟ್ಟಿಗೆಹಾರದಲ್ಲಿ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

Advertisement

ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡಬಿದರೆಗೆ ಲಾರಿಯಲ್ಲಿ ಹೊರಟ್ಟಿದ್ದ ಚಾಲಕ ರಂಗಪ್ಪನನ್ನು ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದು ಪ್ರಶ್ನಿಸಿದ್ದು ಮಾಲೀಕ ಪ್ರಭಾಕರ್‌ ಸಂಬಳ ಕೊಡದೆ ಇರುವುದರಿಂದ ಲಾರಿಯನ್ನು ತೆಗೆದುಕೊಂಡು ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಮೂಡಬಿದರೆ ಮೂಲದ ರಂಗಪ್ಪ, ಕಡೂರಿನ ಲಾರಿ ಮಾಲೀಕ ಪ್ರಭಾಕರ್‌ ಎಂಬುವವರ ಲಾರಿಯ ಚಾಲಕನಾಗಿದ್ದು ಮೂರು ವರ್ಷದಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದು ಲಾಕ್‌ಡೌನ್‌ ಪ್ರಾರಂಭವಾಗಿ 2 ತಿಂಗಳು ಆದರೂ ಸಂಬಳ ನೀಡಿಲ್ಲ. ಇದರಿಂದ ಲಾರಿಯನ್ನು ತೆಗೆದುಕೊಂಡು ಬಂದಿದ್ದಾಗಿ ಪೊಲೀಸರಿಗೆ ರಂಗಪ್ಪ ತಿಳಿಸಿದ್ದಾನೆ. ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next