Advertisement

Kottigehara: ಧಾರಾಕಾರ ಮಳೆ, ಹೈರಾಣಾದ ರೈತರು

02:30 PM Sep 30, 2023 | Team Udayavani |

ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಸೆ.28ರ ಗುರುವಾರದಿಂದ ಧಾರಾಕಾರ ಹಾಗೂ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುತ್ತಿದೆ. ಕಾಫಿನಾಡಿನಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ಕೊಟ್ಟಿಗೆಹಾರದಲ್ಲಿ ಗುರುವಾರ ಬೆಳಿಗ್ಗೆಯಿಂದ ಶನಿವಾರದವರೆಗೆ ಬೆಳಿಗ್ಗೆನವರೆಗಿನ ಪ್ರಕಾರ 164.2ಮಿ.ಮೀ (16ಸೆ.ಮೀ) ಮಳೆ ದಾಖಲಾಗಿದೆ.

Advertisement

ಶನಿವಾರವೂ ಮಳೆ ಮುಂದುವರೆದಿದ್ದು, ರೈತರ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ರೈತರು ಮಳೆಯಿಂದ ಹೈರಾಣಾದ್ದಾರೆ. ಕಾಫಿನಾಡಿನಲ್ಲಿ ಈಗ ಅರೆಬಿಕಾ ಕಾಫಿ ಕೆಲವು ಕಡೆ ಹಣ್ಣಾಗುತ್ತಿದ್ದು ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ.

ತೀರಾ ಮಳೆಯಿಂದ ರೊಬಸ್ವಾ ಕಾಫಿ ಕೂಡ ಉದುರುತ್ತಿದೆ. ಅತಿಯಾದ ಮಳೆಯ ಹಿನ್ನಲೆ ಅಡಿಕೆ ಕೂಡ ಶೀತ ಬಾಧೆಯಿಂದ ಮರದಿಂದ ಅಡಿಕೆ ಉದುರುತ್ತಿದೆ. ಮಳೆಗಾಲದಲ್ಲಿ ಸಕಾಲ ಮಳೆ ಬಾರದೇ ಈಗ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಳೆ ಬರುತ್ತಿರುವುದರಿಂದ ಹವಾಮಾನ ಬದಲಾವಣೆಗೊಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಅನಾನುಕೂಲವಾಗಿದೆ.

ಮಳೆಯಿಂದ ಕೊಟ್ಟಿಗೆಹಾರ, ಅತ್ತಿಗೆರೆ, ಸುತ್ತಮುತ್ತ ಸೇರಿದಂತೆ ವಿದ್ಯುತ್ ಕಣ್ಮುಚ್ಟಾಲೆಯಾಡುತ್ತಿದೆ. ಧಾರಾಕಾರ ಮಳೆಯಿಂದ ಜನರು ಹೈರಾಣಾಗುವಂತಾಗಿದೆ. ಮಳೆಯ ನಡುವೆ ಕಾಫಿನಾಡಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next