Advertisement

Kottigehara: ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಪ್ರವಾಸಿಗನಿಗೆ ಗಾಯ

11:49 AM Oct 13, 2024 | Team Udayavani |

ಕೊಟ್ಟಿಗೆಹಾರ: ಹಸುಗಳು ಸರ್ಕಾರಿ ಬಸ್ ನಿಲ್ದಾಣದ ಒಳಗಡೆ ಬರಬಾರದು ಎಂದು ನಿರ್ಮಿಸಿರುವ ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅ.13ರ ಭಾನುವಾರ ನಡೆದಿದೆ.

Advertisement

ಬೆಂಗಳೂರು ಮೂಲದ ಕಾರ್ತಿಕ್ ಸರ್ಕಾರಿ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದರು. ಈ ವೇಳೆ ಕೊಟ್ಟಿಗೆಹಾರದಲ್ಲಿ ಬಸ್ ನಿಲ್ಲಿಸಿದಾಗ ಟೀ ಕುಡಿಯಲು ಹೋಗುತ್ತಿದ್ದ ವೇಳೆ ಕಾರ್ತಿಕ್ ಕೌ ಗಾರ್ಡಿನ ಕಬ್ಬಿಣದ ರಾಡ್ ಗಳು ಮುರಿದು ಗುಂಡಿ ಬಿದ್ದಿರುವುದನ್ನು ಗಮನಿಸದೇ ಅದರ ಒಳಗೆ ಕಾಲಿಟ್ಟ ಪರಿಣಾಮ ಕಾಲಿಗೆ ಗಾಯವಾಗಿದೆ.

ಕೌ ಗಾರ್ಡ್ ಕೆಳಗಡೆ ಮಳೆ ನೀರು ಹೋಗಲು ದೊಡ್ಡದಾದ ಚರಂಡಿಯಂತಿದ್ದು, ಕಾರ್ತಿಕ್ ಅವರ ಕಾಲು ಸಂಪೂರ್ಣವಾಗಿ ಚರಂಡಿ ಒಳಗೆ ಇಳಿದಿತ್ತು. ಇದರಿಂದ ಕಬ್ಬಿಣದ ರಾಡ್ ಗಳು ಕಾಲಿಗೆ ಬಡಿದು ಒಳ ಭಾಗಕ್ಕೂ ನೋವಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ಅವರನ್ನು ಮೇಲೆಕ್ಕೆ ಎತ್ತಿದ್ದಾರೆ.

ಕೊಟ್ಟಿಗೆಹಾರ ಬಸ್ ನಿಲ್ದಾಣದ ಕೌ ಗಾರ್ಡ್ ಹಾಳಾಗಿ ವರ್ಷಗಳೇ ಕಳೆದಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದೂರದ ಊರಿಂದ ಬರುವ ಪ್ರಯಾಣಿಕರು ಇದನ್ನು ಗಮನಿಸದೆ ಸಾಕಷ್ಟು ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

Advertisement

ಸ್ಕೂಟಿಯ ಒಂದು ಟೈಯರ್ ಸಂಪೂರ್ಣವಾಗಿ ಕೌ ಗಾರ್ಡ್ ಒಳಗೆ ಇಳಿಯಲಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next