Advertisement

ಕೊತ್ತನೂರು ಕೆರೆ ಅಭಿವೃದ್ಧಿಯ ಭರವಸೆ

11:49 AM Jun 18, 2018 | Team Udayavani |

ಬೆಂಗಳೂರು: ಕೊತ್ತನೂರು ಕೆರೆ ಅಭಿವೃದ್ಧಿಗೆ ಬಿಡಿಎ ಹಾಗೂ ಬಿಬಿಎಂಪಿ ವತಿಯಿಂದ 1 ಕೋಟಿ ರೂ. ಅನುದಾನ ದೊರಕಿಸಿಕೊಡುವ ಭರವಸೆಯನ್ನು ಕೇಂದ್ರ ಸಚಿವ ಅನಂತಕುಮಾರ್‌ ನೀಡಿದ್ದಾರೆ.

Advertisement

ಅದಮ್ಯ ಚೇತನ ಸಂಸ್ಥೆ ವತಿಯಿಂದ ಭಾನುವಾರ ಕೊತ್ತನೂರು ಕೆರೆಯ ಆವರಣದಲ್ಲಿ ಆಯೋಜಿಸಿದ್ದ 129ನೇ ಹಸಿರು ಭಾನುವಾರ-ಸಸ್ಯಾಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಪರಿಸರ ಸಮತೋಲನಕ್ಕೆ ಕೆರೆಗಳ ಕೊಡುಗೆ ಮಹತ್ವಪೂರ್ಣವಾಗಿದ್ದು, ಕೆರೆಗಳ ಸಂಕರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಕೆರೆಗಳ ಅಭಿವೃದ್ಧಿಗೆ ರೂಪಿಸಿರುವ ಯೋಜನೆಯಡಿಯಲ್ಲಿ ಕೆರೆಗಳು ಹಾಗೂ ನೀರಿನ ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದೆ. ಅದೇ ರೀತಿ ಕೊತ್ತನೂರು ಕೆರೆಯ ಅಭಿವೃದ್ಧಿಪಡಿಸುವ ಬಿಡಿಎ ಹಾಗೂ ಪಾಲಿಕೆಯ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಅನಂತಕುಮಾರ್‌ ಅವರು ಕೊತ್ತನೂರು ದಿಣ್ಣೆಯ ಶಾಲೆಯೊಂದರ ಉದ್ಘಾಟನಾ ಕಾರ್ಯಕ್ರಮ ನೆರೆವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next