Advertisement

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

12:22 AM Apr 17, 2024 | Team Udayavani |

ಕೋಟ: ಅನಾರೋಗ್ಯದಿಂದ ಬಳಲು ತ್ತಿದ್ದ ವೃದ್ಧೆಯೋರ್ವರು ಮನೆಯಲ್ಲೇ ಮತದಾನ ಕಾರ್ಯಕ್ರಮದಡಿ ಮತ ದಾನ ಮಾಡಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಘಟನೆ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರದ ಶ್ಯಾನುಭೋಗರ ಮನೆಯಲ್ಲಿ ಎ. 15ರಂದು ಸಂಭವಿಸಿದೆ.

Advertisement

ನಿವೃತ್ತ ಗ್ರಾಮಲೆಕ್ಕಾ ಧಿಕಾರಿ ದಿ| ನಾರಾಯಣ ಉಪಾಧ್ಯ ಅವರ ಪತ್ನಿ ಪಿ. ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟವರು.ಅವರಿಗೆ ಶನಿವಾರ ರಾತ್ರಿಯಿಂದ ಸಣ್ಣ ಪ್ರಮಾಣದ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಸೋಮವಾರ ಅವರಿಗೆ ಮನೆಯಿಂದಲೇ ಮತದಾನಕ್ಕೆ ಸಮಯ ನಿಶ್ಚಯವಾಗಿತ್ತು. ಆದ್ದರಿಂದ “ಮತದಾನ ಮುಗಿಸಿಯೇ ನಾನು ಆಸ್ಪತ್ರೆಗೆ ತೆರಳುವುದು’ ಹಠ ಹಿಡಿದಿದ್ದರು. ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಹೋಗುವಂತೆ ಮನೆಯವರು ಮತ್ತೊಮ್ಮೆ ಒತ್ತಾಯಿಸಿದ್ದರೂ “ಅಧಿಕಾರಿಗಳು ಮನೆಗೆ ಬರುವಾಗ ನಾನು ಇಲ್ಲದಿದ್ದರೆ ಅವರಿಗೆ ಬೇಸರವಾಗುತ್ತದೆ, ನಾನು ಮತದಾನ ಮಾಡಲೇ ಬೇಕು’ ಎಂದು ಹೇಳಿ ಮಧ್ಯಾಹ್ನ 12.30ರ ತನಕ ಕಾದು ಮತದಾನ ಮಾಡಿ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಅನಾರೋಗ್ಯ ಉಲ್ಬಣಗೊಂಡು ರಾತ್ರಿ 9 ಗಂಟೆಗೆ ಕೊನೆಯುಸಿರೆಳೆದರು.

ಮೃತರು ಪುತ್ರ, ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next