Advertisement

ಹಂತ-ಹಂತವಾಗಿ ದೇಗುಲಗಳನ್ನು ತೆರೆಯಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

02:59 PM Jun 29, 2021 | Team Udayavani |

ಬ್ರಹ್ಮಾವರ:  ದೇಗುಲಗಳನ್ನು ಭಕ್ತರ ಪೂಜೆ ಪುನಸ್ಕಾರಕ್ಕೆ ಮುಕ್ತಗೊಳಿಸುವ ಕುರಿತು ಬೇಡಿಕೆ ಇದೆ. ಆದರೆ ಒಂದೇ ಬಾರಿಗೆ ದೇಗುಲಗಳನ್ನು ತೆರೆದು ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಿದರೆ ಭಕ್ತರು ಮುಗಿ ಬೀಳುವ ಸಂಭವವಿದೆ. ಹೀಗಾಗಿ ಜುಲೈ 6 ಅನಂತರ ಲಾಕ್ಡೌನ್ ನಿಯಮದಲ್ಲಿ ಇನ್ನಷ್ಟು ಬದಲಾವಣೆಯಾಗಲಿದ್ದು ಆಗ ಹಂತ-ಹಂತವಾಗಿ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ಅಭಿವೃದ್ಧಿ ಸಭೆಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರಿಗೆ ಈ ವಿಚಾರ ತಿಳಿಸಿದರು.

ದೈವ ಪರಿಚಾರಕರು, ದರ್ಶನ ಪಾತ್ರಿಗಳನ್ನು ಕಲಾವಿದರ ಸಾಲಿಗೆ ಸೇರ್ಪಡೆಗೊಳಿಸಿ ಪರಿಹಾರಧನವನ್ನು ನೀಡಲಾಗುತ್ತಿದೆ. ದೇಗುಲಗಳು ತೆರೆದ ಮೇಲೆ ನಾಗಾರಾಧನೆ, ಕೋಲ ಮುಂತಾದ ಸೇವೆಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next