Advertisement

Kota ಜಾಗದ ತಕರಾರು ಪರಿಶೀಲಿಸಿದ ತಹಶೀಲ್ದಾರರಿಗೆ ಬೆದರಿಕೆ

11:38 PM Jul 10, 2024 | Team Udayavani |

ಕೋಟ: ಜಾಗದ ತಕರಾರು ಪರಿಶೀಲಿಸಿದ ಕಾರಣಕ್ಕೆ ಬ್ರಹ್ಮಾವರ ತಹಶೀಲ್ದಾರ್‌ ಶ್ರೀಕಾಂತ್‌ ಎಸ್‌. ಹೆಗ್ಡೆಯವರಿಗೆ ಮಹಿಳೆಯೋರ್ವರು ಫೋನ್‌ನಲ್ಲಿ ಬೆದರಿಕೆ ಹಾಕಿದ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಾಸ್ತಾನ ಪಾಂಡೇಶ್ವರ ನಿವಾಸಿಗಳಾದ ಗಿರಿಜಾ ಮತ್ತು ಮಲ್ಲು ಎನ್ನುವವರ ನಡುವೆ ಮಳೆ ನೀರು ಹರಿದು ಹೋಗದೇ ಇರುವ ಬಗ್ಗೆ ತಕರಾರು ಇದ್ದು ಈ ಕುರಿತು ನೀಡಿದ ದೂರಿನಂತೆ ಜು. 8ರಂದು ತಹಶೀಲ್ದಾರ್‌ ಶ್ರೀಕಾಂತ್‌ ಹೆಗ್ಡೆಯವರು ಸಿಬಂದಿ ಜತೆ ಸೇರಿ ಸ್ಥಳ ಪರಿಶೀಲನೆ ನಡೆಸಿ ಬಂದಿದ್ದರು.

ಅನಂತರ ಇವರು ಕಚೇರಿಯಲ್ಲಿರು ವಾಗ ಅವರ ಮೊಬೈಲ್‌ಗೆ ಅಪರಿಚಿತ ಹೆಂಗಸೊಬ್ಬರು ಕರೆ ಮಾಡಿ ಬೆದರಿಕೆ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರರು ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next