Advertisement

Kota: ಬೈಕ್‌ ಅಪಘಾತ; ಯುವಕ ಸಾವು

11:55 PM Apr 23, 2024 | Team Udayavani |

ಕೋಟ: ಕೋಟ ಬಸ್‌ ನಿಲ್ದಾಣದ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Advertisement

ಕೋಟ ಮಣೂರು ನಿವಾಸಿ ಸುರೇಶ್‌ ಆಚಾರ್ಯ ಅವರ ಪುತ್ರ, ಮರಗೆಲಸ ನಿರ್ವಹಿಸುತ್ತಿದ್ದ ವಿಕಾಸ್‌ ಆಚಾರ್ಯ (22) ಮೃತರು.

ರಾತ್ರಿ ಮಣೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ತೆರಳಿದ ಅವರು ಅನಂತರ ಸಾಸ್ತಾನಕ್ಕೆ ತೆರಳಿದ್ದು ಮನೆಗೆ ವಾಪಸಾಗುತ್ತಿದ್ದಾಗ ಕೋಟ ಬಸ್‌ ನಿಲ್ದಾಣ ಸಮೀಪ ಬೈಕ್‌ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.

ಕೋಟ ಪೊಲೀಸರು ಸ್ಥಳಕ್ಕಾಗಿಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next