Advertisement

Kota: ಅಯೋಧ್ಯೆ ಬಾಲರಾಮನಿಗೆ ಶ್ರೀಕಾಶಿಮಠ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ

10:12 AM Feb 09, 2024 | Team Udayavani |

ಉಡುಪಿ: ಕೋಟದ ಶ್ರೀಕಾಶಿಮಠ ಸಂಸ್ಥಾನ ಈಗಾಗಲೇ ಅಯೋಧ್ಯೆಯ ಬಾಲರಾಮನಿಗೆ ಬೆಳ್ಳಿಯ ಪಲ್ಲಕ್ಕಿ ಸಮರ್ಪಿಸಿದ್ದು, ಇದೀಗ ಗುರುವಾರ (ಫೆ.08) ಸುಮಾರು ಒಂದು ಕೆಜಿ ಚಿನ್ನ ಮತ್ತು 3ಕೆಜಿ ಬೆಳ್ಳಿಯ 70 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಪೀಠ ಪ್ರಭಾವಳಿಯನ್ನು ಬಾಲರಾಮನ ಉತ್ಸವಮೂರ್ತಿಗಾಗಿ ಸಿದ್ಧಪಡಿಸಿದೆ.

Advertisement

ಇದನ್ನೂ ಓದಿ:Childbirth: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಕಟ್ಟಡ ಕಾರ್ಮಿಕ ಮಹಿಳೆ !

ಈ ಹಿನ್ನೆಲೆಯಲ್ಲಿ ಕೋಟದ ಶ್ರೀಕಾಶಿಮಠದ ಶಾಖೆಯಲ್ಲಿ ಚಿನ್ನದ ಪ್ರಭಾವಳಿಯನ್ನು ಅದ್ದೂರಿ ಮೆರವಣಿಗೆ ಮಾಡಿ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.

ಅಯೋಧ್ಯೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಕಾಲದ ಮಂಡಲೋತ್ಸವದಲ್ಲಿ ಈ ಸುವರ್ಣ ಪ್ರಭಾವಳಿಯನ್ನು ಬಾಲರಾಮನ ಉತ್ಸವ ಮೂರ್ತಿಗೆ ತೊಡಿಸಲಾಗುವುದು ಎಂದು ಕಾಶಿಮಠ ಶಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next