Advertisement

ಕೊರಟಗೆರೆ: 1524 ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಪರಿಕರಗಳ ವಿತರಣೆ

08:22 PM Feb 12, 2023 | Team Udayavani |

ಕೊರಟಗೆರೆ: ಸಮಾಜದಲ್ಲಿ ಉತ್ತಮ ಸಮಾನತೆಯ ಪರಿಸರ ಸೃಷ್ಟಿಯಾಗಬೇಕಾದರೆ ಶ್ರೀಮಂತರು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ಮಿಸಲಿಟ್ಟು ಸೇವಾ ಮನೋಭಾವನೆ ಮೂಲಕ ಸಹಾಯ ಮಾಡಬೇಕು ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರಶೀವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.

Advertisement

ಅವರು ತಾಲೂಕಿನ ಸಿದ್ದರಬೆಟ್ಟದಲ್ಲಿ ಶ್ರೀ ರಂಭಾಪುರಿ ಖಾಸಾ ಮಠದ ಸಮುದಾಯ ಭವನದಲ್ಲಿ ಬೆಂಗಳೂರು ಒರಾಕಲ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮತ್ತು ಸೇವ್ ಚಿಲ್ದ್ರನ್ ಸಂಸ್ಥೆಗಳಿಂದ ತಾಲೂಕಿನ ಬುಕ್ಕಾಪಟ್ಟಣ ಮತ್ತು ಬೂದಗವಿ ಗ್ರಾಮಪಂಚಾಯತಿಗಳ 28 ಪ್ರಾಥಮಿಕ ಪ್ರೌಢ ಶಾಲೆಗಳ 1524 ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಪರಿಕರ ವಿತರಣೆ ಮತ್ತು ಕ್ಲೌಡ್ ನೈನ್ ಆಸ್ಪತ್ರೆಗಳ ಸಮೂಹದಿಂದ ಚನ್ನರಾಯನದುರ್ಗ ಹೋಬಳಿಯ ಆಯ್ದ 24 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ ೧೫ ಸಾವಿರ ಮೊತ್ತದ ಟ್ಯಾಬ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಬಡತನ ಶ್ರೀಮಂತದ ತಾರತಮ್ಯವಿದೆ ಅದನ್ನು ಸ್ಪಲ್ಪ ಮಟ್ಟಿಗೆ ಹೋಗಲಾಡಿಸಬೇಕಾದರೆ ಹಣಗಳಿಸಿದವರು ದುಡಿಮೆಯ ಒಂದು ಭಾಗವನ್ನು ಎನ್.ಜಿ.ಓ, ಸಂಘ ಸಂಸ್ಥೆಗಳ ಮೂಲಕ ಸಮಾಜದ ಬಡವರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರೆ ಉತ್ತಮ ಸಮಾಜ ಮೂಡುತ್ತದೆ, ಬೆಂಗಳೂರಿನ ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಸಹಾಯ ದೇವರ ಸೇವೆಯಷ್ಟೇ ಪವಿತ್ರವಾದದ್ದು ಎಂದರು.

ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ಶಿಕ್ಷಣವು ದೇಶದಲ್ಲಿ ಬಹಳ ದೊಡ್ಡ ಬದಲಾಣೆಯನ್ನು ತಂದಿದೆ, ಕಲಿಕೆಯು ಮನುಷ್ಯರ ಮದ್ಯೆ ಬಹಳ ವರ್ಷಗಳ ಹಿಂದೆ ಇದ್ದ ಬೃಹತ್ ಅಂತರವನ್ನು ಕಡಿಮೆ ಮಾಡಿದೆ, ಪ್ರಸ್ತುತ ಸಮಾಜದಲ್ಲಿ ಬಡತನ ಹೋಗಲಾಡಿಸಲು ವಿದ್ಯೆಯೊಂದೆ ಸುರಕ್ಷಿತ ಮಾರ್ಗವಾಗಿದೆ, ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ಹಣ ನೀಡುತ್ತಿದ್ದರೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೆಲ ಮೂಲಭೂತ ಸೌಕರ್ಯ, ತಂತ್ರಜ್ಞಾನ ಕೊರತೆ ಇದೆ, ಆದರೆ ಹಳ್ಳಿಯ ವಿದ್ಯಾರ್ಥಿಗಳು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಪ್ರತಿಭಾನ್ವಿತರಾಗಿದ್ದಾರೆ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ,ಅಂತಹ ಸಾವಿರಾರು ಮಕ್ಕಳಿಗೆ ಇಂದು ಕೆಲವು ಸಂಸ್ಥೆಗಳು ಸಹಾಯ ಮಾಡುತ್ತಿರುವುದು ಅತ್ಯತ್ತಮ ಸೇವೆಯಾಗಿದೆ, ಸಿದ್ದರಬೆಟ್ಟ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮಿಜಿ ಇಂತಹ ಸಮಾಜ ಸೇವಾ ಕಾರ್ಯಗಳನ್ನು ೧೬ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು ಸಿದ್ದರಬೆಟ್ಟ ಇದರ ಕೇಂದ್ರವಾಗಿದೆ, ನಾವೆಲ್ಲರೂ ಸ್ವಾಮಿಜಿಗಳ ಜೊತೆ ಸದಾ ಇರುವುದಾಗಿ ತಿಳಿಸಿದ ಶಾಸಕರು, ನನ್ನ ಕ್ಷೇತ್ರದ ಶಾಲಾ ಮಕ್ಕಳಿಗೆ ಸಹಾಯ ಮಾಡಿದ ಸಂಸ್ಥೆಗಳಿಗೆ ಧನ್ಯವಾದ ತಿಳಿದರು.

ಕಾರ್ಯಕ್ರಮದಲ್ಲಿ ಕನ್ನಿಕಾಪರಮೇಶ್ವರ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಸುದಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು.ಸಿ.ವಿ ಒರಾಕಲ್ ಸಂಸ್ಥೆಯ ಉಪಾದ್ಯಕ್ಷರಾದ ಶ್ರೀಕಂಠನಾರಾಯಣ, ಸುಂದರ ಕೃಷ್ಣ ಸ್ವಾಮಿ, ರಾಷ್ಟೀಯ ಶಿಕ್ಷಣ ಸಮಿತಿ ಅದ್ಯಕ್ಷ ಡಾ.ಎಂ.ಪಿ.ಶ್ಯಾಮ್, ಕ್ಲೌಡ್ ನೈನ್ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಕಿಶೋರ್‌ಕುಮರ್ ಸೇರಿದಂತೆ ಸತೀಶ್ ಇಂದ್ರಾಣ್, ಬಾಲಮುರಳಿ, ಶಶಿಕುಮಾರ್, ಡಾ.ಪ್ರಕಾಶ್, ಚಿನ್ನಿವೆಂಕಟಾಶಟ್ಟಿ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next