Advertisement

Koppal: ಈಜಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಬಾಲಕಿಯರು

09:43 PM May 30, 2024 | Team Udayavani |

ಕೊಪ್ಪಳ: ತಾಲೂಕಿನ ಜಿನ್ನಾಪೂರ ತಾಂಡಾದಲ್ಲಿ ಬಾವಿಯಲ್ಲಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತರನ್ನು ಸೌಂದರ್ಯ ರತ್ನಪ್ಪ ಪೂಜಾರ( 11) ಹಾಗೂ ಲಕ್ಷ್ಮಿ ಶರಣಪ್ಪ ಪೂಜಾರ( 11) ಎಂದು ಗುರುತಿಸಲಾಗಿದೆ.

Advertisement

ಇಬ್ಬರು ಬಾಲಕಿಯರು ಸೇರಿ ನಾಲ್ವರು ತಾಂಡಾದ ಬಳಿಯ ಸಣ್ಣ ಬಾವಿಯಲ್ಲಿ ಈಜಲು ತೆರಳಿದ್ದರು. ಇಬ್ಬರು ಮಹಿಳೆಯರು ಮಾತ್ರ ಈಜಿ ದಡಕ್ಕೆ ಬಂದಿದ್ದಾರೆ. ಇನ್ನಿಬ್ಬರು ಬಾಲಕಿಯರು ಬಾವಿಯಲ್ಲಿ ಸಿಲುಕಿಕೊಂಡು ಮೃತ ಪಟ್ಟಿದ್ದಾರೆ.

ರತ್ನಪ್ಪ ಪೂಜಾರ ಅವರಿಗೆ 3 ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಇದರಲ್ಲಿ ಮೃತಪಟ್ಟ ಸೌಂದರ್ಯ ಮೂರನೇ ಪುತ್ರಿ. ಇನ್ನೂ ಶರಣಪ್ಪ ಪೂಜಾರ ಅವರಿಗೆ 5 ಜನ ಹೆಣ್ಣು ಮಕ್ಕಳು, ಓರ್ವ ಗಂಡು ಮಗುವಿದೆ. ಇವರಲ್ಲಿ ಲಕ್ಷ್ಮಿ ಮೃತಪಟ್ಟಿದ್ದಾಳೆ. ಮಕ್ಕಳ ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next