Advertisement

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

06:23 PM Jun 13, 2024 | Team Udayavani |

ಶ್ರೀರಂಗಪಟ್ಟಣ: ಇಲ್ಲಿನ ಗಂಜಾಂನ ನಿಮಿಷಾಂಬ ದೇವಿ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಗುರುವಾರ ಸ್ನಾನಕ್ಕಿಳಿದಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ನೀರುಪಾಲಾದವರು ಬೆಂಗಳೂರು ಮತ್ತು ತಮಿಳುನಾಡಿನ ನಿವಾಸಿಗಳಾದ ವಿಶಾಲ್ (19) ಮತ್ತು ರೋಹನ್ (17) ಎಂದು ತಿಳಿದು ಬಂದಿದೆ.

ಶ್ರೀರಂಗಪಟ್ಟಣಕ್ಕೆ ಬಂದಿದ್ದ ಇಬ್ಬರು ಕಾವೇರಿ ನದಿ ಹರಿಯುವುದನ್ನು ನೋಡಿ, ಸ್ನಾನ ಮಾಡಲು ನಿರ್ಧರಿಸಿದ್ದರು. ನದಿಯ ಹರಿವು ಹೆಚ್ಚಾಗಿದ್ದುದರಿಂದ ಈಜು ಗೊತ್ತಿಲ್ಲದಿದ್ದರೂ ಆಳದ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next