Advertisement

Koppal: ಸಿಎಂ ವಾಹನ ಸಂಚಾರಕ್ಕೆ ಅಡ್ಡಿ: ಶಾಸಕ ಜನಾರ್ದನ ರೆಡ್ಡಿ ರೇಂಜ್‌ ರೋವರ್‌ ಕಾರು ವಶ

01:38 AM Oct 09, 2024 | Team Udayavani |

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳುವ ವೇಳೆ ಝೀರೊ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದರಿಂದ ಶಾಸಕ ಜನಾರ್ದನ ರೆಡ್ಡಿ ಅವರ ಕಾರು ಚಾಲಕ ಹಾಗೂ ರೆಡ್ಡಿ ಅವರ ಇಬ್ಬರು ಆಪ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ಕಳೆದ ಶನಿವಾರ ಸಂಜೆ ಸಿಂಧನೂರಿನಿಂದ ಕೊಪ್ಪಳದ ಬಸಾಪೂರನತ್ತ ತೆರಳುತ್ತಿದ್ದಾಗ ಝೀರೋ ಟ್ರಾಫಿಕ್‌ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿದ ಆರೋಪದಡಿ ಜನಾರ್ದನ ರೆಡ್ಡಿ ಕಾರು ಚಾಲಕ ಹಾಗೂ ಇಬ್ಬರು ಆಪ್ತರ ವಿರುದ್ಧ ನಗರದ ಸಂಚಾರ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಮಂಗಳವಾರ ರೆಡ್ಡಿ ಅವರ ರೇಂಜ್‌ ರೋವರ್‌ ಕಾರು ಸೇರಿ ಆಪ್ತರ ಎರಡು ಕಾರುಗಳನ್ನು ಜನಾರ್ದನ ರೆಡ್ಡಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ರೆಡ್ಡಿ ಅವರು ಬೆಂಗಳೂರಿನಲ್ಲಿ ಮಾತನಾಡಿ, ಸಿಎಂ ಬರುವ ವೇಳೆ ಮಾಡಲಾಗಿದ್ದ ಝೀರೋ ಟ್ರಾಫಿಕ್‌ ವ್ಯವಸ್ಥೆ ಬಗ್ಗೆ ಮಾಹಿತಿ ಇತ್ತು. ಅರ್ಧ ಗಂಟೆಗೂ ಹೆಚ್ಚು ಕಾಲ ಕಾದೆ. ಆದರೆ ಬಳ್ಳಾರಿಯಲ್ಲಿ ನಮ್ಮ ಕುಟುಂಬದವರು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಿತ್ತು. ಹೀಗಾಗಿ ರಸ್ತೆ ವಿಭಾಜಕ ದಾಟಿ ಸ್ವಲ್ಪ ಮುಂದೆ ಹೋಗಿದ್ದೆ.

ಈ ಕುರಿತು ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ ನನ್ನ ವಿರುದ್ಧ ಕೆಲವು ಆಕ್ಷೇಪಾರ್ಹ ಮಾತನಾಡಿದ್ದಾರೆ. ಪ್ರಕರಣ ದಾಖಲಿಸುವಂತೆ ಪೊಲೀಸ್‌ ಅಧಿ ಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಪೊಲೀಸರು ದೂರು ದಾಖಲಿಸಿ ಕಾರು ವಶಕ್ಕೆ ಕೊಡುವಂತೆ ಕೇಳಿದ್ದರಿಂದ ವಶಕ್ಕೆ ನೀಡಲಾಗಿದೆ. ವಕೀಲರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next