ಹಬ್ಬದ ಸರಣಿ ಕಾರ್ಯಕ್ರಮದ ಅಂಗವಾಗಿ ಕೊಡಿಯಾಲ ಖಬರ ಕೊಂಕಣಿ ಪಾಕ್ಷಿಕ ಪತ್ರಿಕೆಯ ದಶಮಾನೋತ್ಸವದ ಸಂದರ್ಭ ಪತ್ರಿಕೆಯ ಸಹಯೋಗದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಯಿತು.
Advertisement
ಸಮ್ಮೇಳನವನ್ನು ಉದ್ಘಾಟಿಸಿದ ಲೆಕ್ಕ ಪರಿಶೋಧಕ ಹಾಗೂ ಸಮಾಜ ಸೇವಕ ನಂದಗೋಪಾಲ ಶೆಣೈ, ಕೊಂಕಣಿ ಭಾಷೆಯಲ್ಲಿ 10 ವರ್ಷ ಪತ್ರಿಕೆಯನ್ನು ಪ್ರಕಟಿಸಿರುವುದು ಸಾಧನೆಯೇ ಸರಿ. ಇಂದು ಕೊಡಿಯಾಲ ಖಬರ ಕೇವಲ ಒಂದು ಪತ್ರಿಕೆಯಾಗಿ ಉಳಿದಿಲ್ಲ. ಅದು ಒಂದು ಸಂಸ್ಥೆಯಾಗಿ ಬೆಳೆದಿದೆ. ನಾವೆಲ್ಲರೂ ಅದರೊಂದಿಗೆ ಸೇರಿ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ. ದೇವದಾಸ ಪೈ ಹಾಗೂ ಸಮಾಜ ಸೇವಕ
ಪ್ರಶಾಂತ ರಾವ್ ಉಪಸ್ಥಿತರಿದ್ದರು. ಉಪ ಸಂಪಾದಕಿ ವಿದ್ಯಾ ಬಾಳಿಗಾ ವಂದಿಸಿದರು. ರತ್ನಾಕರ ಕುಡ್ವ ಕಾರ್ಯಕ್ರಮ ನಿರೂಪಿಸಿದರು.
Related Articles
ಸಮಾರೋಪದಲ್ಲಿ ಕೊಡಿಯಾಲ ಖಬರ ಪತ್ರಿಕೆಯ ಬ್ಹೊಂವಡಿ ಆಟಯತಾ ಅಂಕಣದ ಬರಹಗಾರ ಕೆ.ಸಿ. ಪ್ರಭು ಕಲಾಕಾರರಿಗೆ ಸ್ಮರಣಿಕೆ ನೀಡಿದರು. ಪತ್ರಿಕೆಯ ಜಾಹಿರಾತು ವಿಭಾಗದ ಸಂಚಾಲಕಿ ಜ್ಯೋತಿ ಶೆಣೈ, ವಿಘ್ನೇಶ
ಬಾಳಿಗಾ, ಪ್ರವೀಣ ಕಾಮತ್, ಸುಮಾ ಪಂಡಿತ, ಸುರೇಶ ಶೆಣೈ ಸಹಕರಿಸಿದರು. ಅಕಾಡೆಮಿಯ ಸದಸ್ಯ ನಾಗೇಶ
ಅಣ್ವೇಕರ, ರಾಮ ಮೇಸ್ತ ಮತ್ತು ಲಕ್ಷ್ಮಣ ಪ್ರಭು ಉಪಸ್ಥಿತರಿದ್ದರು.
Advertisement