Advertisement
ಮುಖ್ಯ ಅತಿಥಿಯಾಗಿದ್ದ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಮಾತನಾಡಿ, ಮಂಗಳೂರು ವಿ.ವಿ.ಯಲ್ಲಿ ನೂತನವಾಗಿ ಸ್ಥಾಪಿತವಾದ ಕೊಂಕಣಿ ಅಧ್ಯಯನ ಪೀಠದ ಉದ್ದೇಶಗಳು ಸಾರ್ಥಕವಾಗಿ ಈಡೇರಲು ಪ್ರೊ| ಭೈರಪ್ಪ ಅವರ ಅನುಭವಪೂರ್ಣ ಮಾರ್ಗದರ್ಶನ ಪೂರಕವಾಗಿ ಪರಿಣಮಿಸಿತು. ಇದರಿಂದಾಗಿ ಕೊಂಕಣಿ ಭಾಷಿಕ ವಿದ್ಯಾರ್ಥಿಗಳು ಕೊಂಕಣಿ ಎಂ.ಎ. ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಸಾಧ್ಯವಾಗಿದೆ. ಅಲ್ಲದೆ ವಿಶ್ವ ಕೊಂಕಣಿ ಕೇಂದ್ರದ “ಕೊಂಕಣಿಗಳ ವಲಸೆ ಮತ್ತು ನೆಲೆಗಳ ಚಾರಿತ್ರಿಕ ಅಧ್ಯಯನ ಹಾಗೂ ದಾಖಲೀಕರಣ ಯೋಜನೆಯನ್ನೂ ಅಧ್ಯಯನ ಪೀಠದ ಸಹಕಾರದಿಂದ ಕಾರ್ಯರೂಪಕ್ಕಿಳಿಸಲು ಸುಲಭವಾಯಿತು’ ಎಂದರು.
Advertisement
ಕೊಂಕಣಿ ಭಾಷಿಕರ ಅಧ್ಯಯನ, ದಾಖಲೀಕರಣ: ಪ್ರೊ|ಭೈರಪ್ಪ
08:20 AM Jun 04, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.