Advertisement

Congress leader; ಚುನಾವಣ ರಾಜಕೀಯಕ್ಕೆ ವಿದಾಯ ಹೇಳಿದ ಎಂ.ವೀರಪ್ಪ ಮೊಯ್ಲಿ

11:03 PM Apr 08, 2024 | Team Udayavani |

ಚಿಕ್ಕಬಳ್ಳಾಪುರ: ಇನ್ನೂ ಮುಂದೆ ಯಾವುದೇ ಚುನಾವಣೆಗೆ ನಾನು ನಿಲ್ಲಲಾರೆ. ಆದರೆ ರಾಜಕಾರಣದಿಂದ ದೂರ ಇರಲಾರೆ. ಪಕ್ಷದೊಳಗೆ ಸಕ್ರಿಯ ಕಾರ್ಯಕರ್ತನಾಗಿ ಇರುತ್ತೇನೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಚುನಾವಣ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.

Advertisement

ನಗರದ ವಾಪಸಂದ್ರದ ತಮ್ಮ ನಿವಾಸದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಜತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ನಾನು ಕೂಡ ಟಿಕೆಟ್‌ ಆಕಾಂಕ್ಷಿ ಆಗಿದ್ದೆ. ಆದರೆ, ವರಿಷ್ಠರು ರಕ್ಷಾ ರಾಮಯ್ಯರಿಗೆ ಟಿಕೆಟ್‌ ಕೊಡುತ್ತೇವೆ, ನಿಮ್ಮ ಒಪ್ಪಿಗೆ ಬೇಕು ಅಂದರು. ನಾನು ಸಹಮತ ಕೊಟ್ಟೆ ಎಂದ ಅವರು, ರಕ್ಷಾ ರಾಮಯ್ಯಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next