Advertisement

ಕೊಂಕಣ ರೈಲ್ವೇಯ “ಫ್ರೆಶ್‌ ಅಪ್‌’ಉದ್ಘಾಟನೆ

12:30 AM Jan 05, 2019 | Team Udayavani |

ಉಡುಪಿ: ಉಡುಪಿ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಐಆರ್‌ಸಿಟಿಸಿ (ಇಂಡಿಯನ್‌ ರೈಲ್ವೇಸ್‌ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌) ಫ್ರೆಶ್‌ಮೈಂಡ್ಸ್‌ ಸರ್ವೀಸಸ್‌ ಪ್ರೈಲಿ. ಮೂಲಕ ಆರಂಭಿಸಿರುವ ಕೊಂಕಣ ರೈಲ್ವೇಯ ಪ್ರಥಮ “ಪ್ರಶ್‌ ಅಪ್‌’ ವಿಶ್ರಾಂತಿ ಗೃಹವನ್ನು ಕೊಂಕಣ ರೈಲ್ವೇಯ ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಮೊಹಮ್ಮದ್‌ ಆಸಿಮ್‌ ಸುಲೈಮಾನ್‌ ಶುಕ್ರವಾರ ಉದ್ಘಾಟಿಸಿದರು.

Advertisement

ರೈಲಿಗೆ ಕಾಯುವವರು ವಿಶ್ರಾಂತಿ ಪಡೆಯಲು ಈ ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ. ಇದು ಐಷಾರಾಮಿ ಕೊಠಡಿಗಳನ್ನು ಹೊಂದಿದೆ. ತಲಾ ಎರಡು ಡಬಲ್‌ ಬೆಡ್‌ಗಳನ್ನು ಒಳಗೊಂಡ ಎರಡು ಕೊಠಡಿಗಳು ಮತ್ತು ಆರು ಸಿಂಗಲ್‌ ಬೆಡ್‌ಗಳನ್ನು ಒಳಗೊಂಡಿರುವ ಒಂದು ಕೊಠಡಿ ಇದೆ. ಇಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆದುಕೊಳ್ಳಬಹುದು. ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಅಥವಾ ನೇರವಾಗಿ ಫ್ರೆಶ್‌ ಅಪ್‌ ಕೌಂಟರ್‌ಗೆ ಬಂದು ಈ ಕೊಠಡಿಗಳ ಬುಕ್ಕಿಂಗ್‌ ಮಾಡಬಹುದು. ಇದೇ ರೀತಿಯ ವಿಶ್ರಾಂತಿ ಕೊಠಡಿಗಳನ್ನು ಮಡ್ಗಾಂವ್‌ ಮತ್ತು ತಿವಿಂ ನಿಲ್ದಾಣಗಳಲ್ಲಿಯೂ ಆರಂಭಿಸಲಾಗುವುದು’ ಎಂದರು.

ದೇಶದ 6ನೇ “ಫ್ರೆಶ್‌ ಅಪ್‌’
ಈ ಕೊಠಡಿಗಳು ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು 1 ಗಂಟೆಯಿಂದ ಆರಂಭಿಸಿ 24 ಗಂಟೆ ಕಾಲ (ರೈಲು ಬರಲು ಇರುವ ಅವಧಿ ಪರಿಗಣಿಸಿ) ತಂಗಲು ಅವಕಾಶವಿದೆ. ಗಂಟೆಗೆ ಅನುಗುಣವಾಗಿ ಪಾವತಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.  ಐಆರ್‌ಸಿಟಿಸಿ ಹೆಚ್ಚುವರಿ ಮಹಾಪ್ರಬಂಧಕ ರಾಜೇಶ್‌ ರಾಣಾ, ಕೊಂಕಣ ರೈಲ್ವೇ ಮಂಗಳೂರು ವಿಭಾಗದ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ಎಸ್‌. ವಿನಯ ಕುಮಾರ್‌, ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ, ಫ್ರೆಶ್‌ ಅಪ್‌ನ ಸಿಇಒ ವಿನಿಲ್‌ ರೆಡ್ಡಿ, ಫ್ರೆಶ್‌ ಅಪ್‌ ಎಚ್‌ಆರ್‌ನ ಬಿಂದು ರಾಮಾವತ್‌, ಫ್ರೆಶ್‌ ಅಪ್‌ ಆಪರೇಷನ್ಸ್‌ ವಿಭಾಗದ ಸಂದೇಶ್‌ ರೆಡ್ಡಿ, ಸೂಪರ್‌ವೈಸರ್‌ ಕುನಾಲ್‌ ವಾಕೆ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next