Advertisement

ತಮಿಳುನಾಡಿನಲ್ಲಿ ಕೊಂಗುನಾಡು ಸದ್ದು : ಏನಿದು ಕೊಂಗುನಾಡು?

02:18 AM Jul 11, 2021 | Team Udayavani |

ಚೆನ್ನೈ: “ಕೇಂದ್ರ’ ಸರಕಾರ ಪದ ಬಳಕೆ ಮಾಡದೆ “ಒಕ್ಕೂಟ’ ಸರಕಾರ ಎಂಬ ಸಂಬೋಧನೆಗೆ ಮುಂದಾಗಿರುವ ತಮಿಳುನಾಡು ಸರಕಾರಕ್ಕೆ ಬಿಜೆಪಿ ಕೇಂದ್ರಾಡಳಿತದ ಶಾಕ್‌ ನೀಡಲಿದೆಯೇ?

Advertisement

ಕೇಂದ್ರ ಸಚಿವ ಸಂಪುಟ ಪುನಾರಚನೆಯ ಅನಂತರ “ಕೊಂಗುನಾಡು’ ಪದದ ಬಗ್ಗೆ ಭಾರೀ ಊಹಾಪೋಹ ಎದ್ದಿದೆ. ಈ ಬಗ್ಗೆ ಕೇಂದ್ರ ತುಟಿ ಬಿಚ್ಚಿಲ್ಲ. ಆದರೆ ಕೇಂದ್ರದ ನೂತನ ಸಚಿವ, ತಮಿಳುನಾಡು ಮೂಲದ ಎಲ್‌. ಮುರುಗನ್‌ ತನ್ನ ಪರಿಚಯ ವಿವರದಲ್ಲಿ ತಾನು “ತಮಿಳುನಾಡಿನ ಕೊಂಗುನಾಡಿನಿಂದ ಬಂದವನು’ ಎಂದು ಉಲ್ಲೇಖೀಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಎಐಎಡಿಎಂಕೆ, ಬಿಜೆಪಿ ಬಲಿಷ್ಠ
ಈ ಭಾಗದಲ್ಲಿ ಎಐಎಡಿಎಂಕೆ ಪ್ರಬಲವಾಗಿದೆ. 75 ವಿಧಾನಸಭಾ ಸ್ಥಾನಗಳಲ್ಲಿ ಎಐಎಡಿಎಂಕೆ 40ರಲ್ಲಿ ಗೆದ್ದಿದೆ. ಬಿಜೆಪಿ ಕೂಡ ಬಲಿಷ್ಠವಾಗಿದೆ. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ. ಅಣ್ಣಾಮಲೈ ಇದೇ ಭಾಗದವರು. ಹೀಗಾಗಿ ಕೇಂದ್ರ ಸರಕಾರವು ಈ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬಹುದು ಎಂದು ಸ್ಥಳೀಯ ಪತ್ರಿಕೆಯೊಂದು ವಿಶ್ಲೇಷಿಸಿದೆ.

ಪುದುಚೇರಿ ಮಾದರಿ
ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ, ಪುದುಚೇರಿಯಲ್ಲಿ ಮಾತ್ರ ಬಿಜೆಪಿ ಸರಕಾರವಿದೆ. ಒಂದು ವೇಳೆ ತಮಿಳುನಾಡಿನಲ್ಲಿರುವ ಈ ಭಾಗವನ್ನು ಪ್ರತ್ಯೇಕಿಸಿದರೆ ಇಲ್ಲೂ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next