Advertisement

ಕೊಲ್ಲೂರು: ರಿಕ್ಷಾ ಚಾಲಕನನ್ನು ಬೆದರಿಸಿ ಜಾನುವಾರು ಕಳವು

01:27 AM Feb 23, 2023 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾಮದ ರಿಕ್ಷಾ ಚಾಲಕ ಪ್ರವೀಣ್‌ ಶೆಟ್ಟಿ ಹಾಗೂ ಆತನ ಸ್ನೇಹಿತ ನಾರಾಯಣ ಅವರು ವಂಡ್ಸೆಗೆ ಬಾಡಿಗೆಗೆ ಬಂದು ಪ್ರಯಾಣಿಕರನ್ನು ಇಳಿಸಿ ಮರಳಿ ಜಡ್ಕಲ್‌ಗೆ ತೆರಳುತ್ತಿದ್ದಾಗ ಜಡ್ಕಲ್‌ ಮುದೂರು ಮುಖ್ಯ ರಸ್ತೆಯ ಸೂಪರ್‌ ಮಾರ್ಕೆಟ್‌ ಬಳಿ ರಿಟ್ಜ್ ಕಾರೊಂದು ಚಾಲನ ಸ್ಥಿತಿಯಲ್ಲಿದ್ದು, ಇಬ್ಬರೂ ಅಪರಿಚಿತ ವ್ಯಕ್ತಿಗಳು ಜಾನುವಾರುಗಳನ್ನು ಕಳವು ಮಾಡಿ, ಕಾರಿನ ಢಿಕ್ಕಿಗೆ ತುಂಬಿಸುತ್ತಿದ್ದಾಗ ಅಲ್ಲಿಗೆ ತೆರಳಿ ವಿಚಾರಿಸಿದಾಗ ಕೊಲೆ ಬೆದರಿಕೆ ಹಾಕಿ, ಜಾನುವಾರು ಸಹಿತ ಪಲಾಯನಗೈದರು ಎಂದು ಕೊಲ್ಲೂರು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next