Advertisement

Kollur: ಮರಕ್ಕೆ ಗುದ್ದಿ ಪಿಕಪ್‌ಗೆ ಢಿಕ್ಕಿಯಾದ ಬಸ್‌; ಹಲವರಿಗೆ ಗಾಯ

09:07 PM Sep 25, 2024 | Team Udayavani |

ಕೊಲ್ಲೂರು: ಇಡೂರು ಸಮೀಪದ ಜೆನ್ನಾಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ. 25ರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡು ಕುಂದಾಪುರ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಕುಂದಾಪುರದಿಂದ ಕೊಲ್ಲೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಈ ಸಂದರ್ಭ ಎದುರಿನಿಂದ ತರಕಾರಿ ಹೊತ್ತು ಬರುತ್ತಿದ್ದ ಪಿಕಪ್‌ ವ್ಯಾನ್‌ಗೆ ಢಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಪಿಕಪ್‌ ಚಾಲಕ ವಾಸಿಮ್‌ ಹಾಗೂ ಆತನ ಸಹೋದರ ಅಬಿತ್‌ ಗಂಭೀರವಾಗಿ ಗಾಯಗೊಂಡರು.

ಬಸ್‌ನಲ್ಲಿದ್ದ ರಾಘವೇಂದ್ರ, ವಿದ್ಯಾರ್ಥಿಗಳಾದ ಅಮೃತಾ, ಪ್ರಸುದಾ, ಸುಶ್ಮಿತಾ, ಶಿಕ್ಷಕ ಶಂಕರ್‌ ನಾಯಕ್‌, ಬಸ್‌ ಚಾಲಕ ವಿಜಯ್‌ ಕುಮಾರ್‌ ಅವರು ಕೂಡ ಗಾಯಗೊಂಡರು.

ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next