Advertisement

ಕೊಲ್ಲೂರು: ಮಳೆಗಾಲಕ್ಕೂ ಮೊದಲೇ ಜಲಕ್ಷಾಮ?

06:00 AM Sep 29, 2018 | Team Udayavani |

ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇಗುಲದ ಬಲ ಪಾರ್ಶ್ವದಲ್ಲಿ ಹರಿಯುತ್ತಿರುವ ಅಗ್ನಿತೀರ್ಥ ನದಿಯ ನೀರಿನ ಮಟ್ಟ ಮಳೆಗಾಲ ಮುಕ್ತಾಯಕ್ಕೂ ಮುನ್ನ ತಗ್ಗಿದ್ದು, ಭವಿಷ್ಯದಲ್ಲಿ ಜಲಕ್ಷಾಮದ ಭೀತಿಗೆ ಕಾರಣವಾಗಿದೆ. 
 
ಸಾಮಾನ್ಯವಾಗಿ ಅಕ್ಟೋಬರ್‌, ನವೆಂಬರ್‌ವರೆಗೂ ತುಂಬಿ ಹರಿಯುತ್ತಿರುವ ಅಗ್ನಿತೀರ್ಥ ನದಿ ಮಟ್ಟ ಇಳಿದಿರುವುದು ಗ್ರಾಮಸ್ಥರ ಅಚ್ಚರಿಕೆ ಕಾರಣವಾಗಿದೆ.ಕೊಡಚಾದ್ರಿಯ ತಪ್ಪಲಿನ ಕೊಲ್ಲೂರು ಸಹಿತ ಜಡ್ಕಲ್‌, ಮುದೂರು, ಕೆರಾಡಿ, ಬೆಳ್ಳಾಲ, ಮೂಡಮುಂದ, ಆಜ್ರಿ ಭಾಗಗಳಲ್ಲಿ ಡಿಸೆಂಬರ್‌ವರೆಗೂ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಈಗಲೇ ನದಿ-ತೊರೆಗಳಲ್ಲಿ ನೀರಿನ ಹರಿವು ತೀವ್ರ ಕುಸಿತವಾಗಿರುವುದು ಆತಂಕದ ವಾತಾವರಣ ನಿರ್ಮಿಸಿದೆ.  ಸೌಪರ್ಣಿಕ ಹೊಳೆಯಲ್ಲೂ ನೀರಿನ ಮಟ್ಟ ಕುಸಿದಿದ್ದು ಸ್ನಾನಕ್ಕೆ ತೆರಳುವ ಮಂದಿ ಆಳದ ಅರಿವಿಲ್ಲದೇ ಮುಂದಕ್ಕೆ ತೆರಳಿದರೆ ಅಪಾಯವಾಗುವ ಭೀತಿ ಇದೆ. 

Advertisement

ಜಲಕ್ಷಾಮ ಎದುರಾದೀತು
ಮಾವಿನಕಾರು ಹಾಗೂ ಕೊಲ್ಲೂರುಗಳಲ್ಲಿ ಅಕ್ಟೋಬರ್‌ನಲ್ಲಿ ಮಳೆಯ ಅಭಾವ ಕಂಡುಬಂದಲ್ಲಿ ಮುಂದಿನ ಮಾರ್ಚ್‌-ಮೇ ತಿಂಗಳಲ್ಲಿ ಈ ಭಾಗಗಳಲ್ಲಿ ಜಲಕ್ಷಾಮ ಎದುರಾದೀತು. 
– ಜಯಪ್ರಕಾಶ ಶೆಟ್ಟಿ, ಮಾಜಿ ಅಧ್ಯಕ್ಷರು, ಕೊಲ್ಲೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next