Advertisement

ಕೊಳ್ಳೇಗಾಲ : ಅಕ್ರಮ ಕಾಡು ಹಂದಿ ಮಾರಾಟ ಯತ್ನ : ಪೊಲೀಸರಿಂದ ಮೂವರ ಬಂಧನ

08:22 PM Jul 17, 2022 | Team Udayavani |

ಕೊಳ್ಳೇಗಾಲ : ಕಾಡು ಹಂದಿಗಳನ್ನು ಬೇಟೆಯಾಡಿ ಮಾರಾಟ ಮಾಡಲು ಆಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಮೂವರನ್ನು ಸಿಐಡಿ ಅರಣ್ಯ ಪೊಲೀಸ್ ಪಿಎಸ್.ಐ, ಆನಂದ್ ಕುಮಾರ್ ಮತ್ತು ಸಿಬಂದಿಗಳು ತಾಲ್ಲೂಕಿನ ಮುಳ್ಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಭಾನುವಾರ ಬಂದಿಸುವಲ್ಲಿ ಯಶಸ್ವೀ ಯಾಗಿದ್ದಾರೆ..

Advertisement

ಖಚಿತ ಮಾಹಿತಿಯ ಮೇರೆಗೆ ಮಂಡ್ಯ ಜಿಲ್ಲೆಯ ಮೊಳೆ ಕೊಪ್ಪಲು ಗ್ರಾಮದವರಾದ ವಿಜಯ್ ಕುಮಾರ್ (31) ನಾಗೇಶ್ (43) ಜಯ ರಾಮ್ (48) ಎಂಬುವವರೇ ಪೊಲೀಸರ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ.

ಆರೋಪಿಗಳ ಬಳಿ ಜೀವಂತವಾಗಿದ್ದ ಮೂರು ಕಾಡುಹಂದಿ, ಮೃತಪಟ್ಟ ಒಂದು ಹಂದಿ, ಮರದ ತುಂಡು 20, ಇಪ್ಪತ್ತು ಸಾವಿರ ರೂ ಬೆಲೆ ಬಾಳುವ ಬಲೆ. ಜೊತೆಗೆ ಒಂದು ಗೂಡ್ಸ್ ವಾಹನ, ಮೂರು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು ಹಂದಿಯನ್ನು ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ..

ಪ್ರಕರಣವನ್ನು ದಾಖಲಿಸಿರುವ ಸಿ.ಐ.ಡಿ ಅರಣ್ಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next