Advertisement

Sirsi: ಕೊಲ್ಕತ್ತಾದ ಈ ವ್ಯಕ್ತಿ ಸೈಕಲ್ ಪ್ರವಾಸ ಹೊರಟಿದ್ದೇಕೆ ಗೊತ್ತಾ ? ಇಲ್ಲಿದೆ ಮಾಹಿತಿ

04:14 PM Aug 09, 2023 | Team Udayavani |

ಶಿರಸಿ: ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಜಾಗೃತಿ ಮೂಡಬೇಕು. ಜಲ ಸಂರಕ್ಷಿಸಬೇಕು, ಪರಿಸರ ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಕೊಲ್ಕತ್ತಾದಿಂದ ವ್ಯಕ್ತಿಯೋರ್ವರು ಸೈಕಲ್‌ ಜಾಥಾ ಆರಂಭಿಸಿದ್ದಾರೆ.

Advertisement

ಕಳೆದ‌ ನವೆಂಬರ್ ತಿಂಗಳಲ್ಲಿ ಹೊರಟ ಮೊಹಮ್ಮದ್ ಇರ್ಪಾನ್ ಸಿದ್ದಕಿ ಅವರು ಸೈಕಲ್ ಏರಿ ಕೋಲ್ಕತ್ತಾ, ಸಿಕ್ಕಿಂ, ಅಸ್ಸಾಂ, ಅರುಣಾಚಲ , ನಾಗಾಲ್ಯಾಂಡ್, ಬಿಹಾರ್, ಯು‌ಪಿ , ಎಮ್ ಪಿ, ಪಂಜಾಬ್, ರಾಜಸ್ತಾನ, ಕೇದಾರನಾಥ, ಡೆಲ್ಲಿ, ಗುಜರಾತ್, ಮುಂಬೈ, ಗೋವಾ ಮುಗಿಸಿ‌ ಈಗ‌ ಕರ್ನಾಟಕ ಪ್ರವಾಸ ನಡೆಸುತ್ತಿದ್ದಾರೆ.

ಈಗಾಗಲೇ 16,700 ಕಿಲೋಮೀಟರ್ ದೂರ ಸೈಕಲ್ ತುಳಿದಿದ್ದಾರೆ.

ಸ್ವಚ್ಛ ಭಾರತಕ್ಕಾಗಿ ಮತ್ತು ದೇಶದ ಪ್ರತಿ ವ್ಯಕ್ತಿ ದೇಶದ ಬಗ್ಗೆ 5 ನಿಮಷವಾದರೂ ಆಲೋಚಿಸಬೇಕು. ಬದಲಾವಣೆ ನಮ್ಮಿಂದಲೇ ಸಾಧ್ಯ ಎಂದು ಜಾಗೃತಿಗಾಗಿ ಕಾರ್ಯ ಆರಂಭಿಸಿದ್ದಾಗಿ ಹೇಳುತ್ತಾರೆ.

ಇದನ್ನೂ ಓದಿ: Flying Kiss ; ಸಂಸತ್ ನಲ್ಲಿ ರಾಹುಲ್ ಗಾಂಧಿ ವರ್ತನೆ ಕುರಿತು ಆಕ್ರೋಶ

Advertisement
Advertisement

Udayavani is now on Telegram. Click here to join our channel and stay updated with the latest news.

Next