Advertisement

ಕೋಲ್ಕತ : ಒಳರೋಗಿ ಬಾಲಕಿಯ ಸಾವು: ಉದ್ರಿಕ್ತರಿಂದ ಆಸ್ಪತ್ರೆ ಮೇಲೆ ದಾಳಿ

04:16 PM Feb 15, 2017 | Team Udayavani |

ಕೋಲ್ಕತ : ಒಳರೋಗಿಯಾಗಿ ಆಸ್ಪತ್ರೆ ಸೇರಿದ ಬಾಲಕಿಯ ಅಛಾನಕ್‌ ಸಾವಿನಿಂದ ಆಕ್ರೋಶಿತರಾದ ಸುಮಾರು ನೂರಕ್ಕೂ ಹೆಚ್ಚು ಉದ್ರಿಕ್ತ ಜನರ ತಂಡವೊಂದು ನಗರದ ನೈಋತ್ಯ ಭಾಗದಲ್ಲಿನ ಏಕಬಲಪುರದಲ್ಲಿರುವ ಸಿಎಂಆರ್‌ಐ ಆಸ್ಪತ್ರೆಗೆ ನುಗ್ಗಿ ಅಲ್ಲಿನ ಪೀಠೊಪಕರಣ, ಕಂಪ್ಯೂಟರ್‌, ಹಾಗೂ ಇನ್ನಿತರ ಸಲಕರಣೆಗಳನ್ನು ಧ್ವಂಸ ಮಾಡಿ ಅನೇಕ ವೈದ್ಯಕೀಯ ಸಿಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.

Advertisement

ಬಾಲಕಿಯನ್ನು ನಿನ್ನೆ ಮಂಗಳವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಆಕೆ ಇಂದು ಮೃತಪಟ್ಟಳು. ಇದರಿಂದ ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಆಸ್ಪತ್ರೆಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿಗುಟ್ಟಿತು. ರಿಸೆಪ್‌ಶನ್‌ ಹಾಗೂ ಬಿಲ್ಲಿಂಗ್‌ ಕೌಂಟರ್‌ ಮೇಲೆ ದಾಳಿ ನಡೆಸಿ ಕಂಪ್ಯೂಟರ್‌ ಹಾಗೂ ಪೀಠೊಪಕರಣಗಳನ್ನು ನಾಶಪಡಿಸಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಈ ರೀತಿಯ ದಾಂಧಲೆ ನಡೆಸಿಯೂ ತೃಪ್ತವಾಗದ ಉದ್ರಿಕ್ತರ ಗುಂಪು ಅನಂತರ ಏಕಬಲಪುರದ ಡೈಮಂಡ್‌ ಹಾರ್ಬರ್‌ ರಸ್ತೆಯನ್ನು ತಡೆದು ಬೆಳಗ್ಗಿನ ವಾಹನ ದಟ್ಟನೆಯ ವೇಳೆ ಕೋರ್ಟ್‌ ಕಚೇರಿ, ಬ್ಯಾಂಕುಗಳಿಗೆ ಹೋಗುವವರಿಗೆ ತೀವ್ರ ತೊಂದರೆ ಮಾಡಿತು.

ಉದ್ರಿಕ್ತರನ್ನು ನಿಯಂತ್ರಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಆಸ್ಪತ್ರೆಗೆ ಬಿಗುಬಂದೋಬಸ್ತ್ ಏರ್ಪಡಿಸಲಾಯಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next