Advertisement

ಕೋವಿಡ್ ವಾರಿಯರ್ಗೆ ಸನ್ಮಾನ

03:43 PM May 13, 2020 | Naveen |

ಕೊಲ್ಹಾರ: ಕೋವಿಡ್ ವಾರಿಯರ್ಗೆ ಸನ್ಮಾನ ಮಹಾಮಾರಿ ತಡೆಗಟ್ಟಲು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್‌ ಇಲಾಖೆ ಹಾಗೂ ತಾಲೂಕು ಆಡಳಿತ ಮಂಡಳಿಯವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಬಿಜೆಪಿ ಜಿಲ್ಲಾ ವಕ್ತಾರ ಟಿ.ಟಿ. ಹಗೇದಾಳ ಹೇಳಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರು ಕೋವಿಡ್ ವಾರಿಯರ್ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತಿಗೆ ಕೋವಿಡ್ ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿ ನಾವುಗಳು ನೆಮ್ಮದಿಯಿಂದ ಮನೆಯಲ್ಲಿದ್ದೇವೆ. ಆದರೆ ವೈದ್ಯರು, ಪೊಲೀಸ್‌ ಇಲಾಖೆ, ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರು ಹಗಲಿರುಳು ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಎಪಿಎಂಸಿ ಮಾಜಿ ನಿರ್ದೇಶಕ ಸಿ.ಎಸ್‌. ಗಿಡ್ಡಪ್ಪಗೋಳ, ಬಿ.ಯು. ಗಿಡ್ಡಪ್ಪಗೋಳ, ಪಡಿಯಪ್ಪ ನಾಗರಾಳ, ಮಹೇಶ ಗಿಡ್ಡಪ್ಪಗೋಳ, ಮುದಿಗೆಪ್ಪ ಗಿಡ್ಡಪ್ಪಗೋಳ, ಷಣ್ಮುಖ ಚಲವಾದಿ, ಸದ್ದಾಂ ಹೊನ್ಯಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next